ಪಂಜಿಮೊಗರು ಶಾಲೆಯಲ್ಲಿ ಚಿಣ್ಣರ ಮೇಳ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರುಇಲ್ಲಿ ಮೇ 1ರಿಂದ 4ರವರೆಗೆ ಶಾಲಾ ಮಕ್ಕಳ ಬೇಸಗೆ ರಜಾ ಶಿಬಿರ ಚಿಣ್ಣರ ಮೇಳ ಯಶಸ್ವಿಯಾಗಿ ನಡೆಯಿತು.
![](https://i0.wp.com/assets.mangalorean.com/2019/05/chinnara-mela.jpg?resize=800%2C509&ssl=1)
ಭಗತ್ ಸಿಂಗ್ ಸ್ಮಾರಕಟ್ರಸ್ಟ್, ಡಿವೈಎಫ್ಐ ಪಂಜಿಮೊಗರುಘಟಕವತಿಯಿಂದ ಶಿಬಿರವನ್ನು ಆಯೋಜಿಸಲಾಗಿತ್ತು ಸ್ಥಳೀಯ ಉದ್ಯಮಿ ಕ್ಲೆವರ್ಡಿಸೋಜ ಕೂಳೂರು, ಶಿಬಿರವನ್ನು ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿಗಣ್ಯರಾದ ಪಿ.ಸಿ ಸುಕುಮಾರ್ ಮಾಜಿಕಾರ್ಪೊರೇಟರ್ದಯಾನಂದ ಶೆಟ್ಟಿ, ಎಸ್.ಎಫ್.ಐ ಮುಖಂಡರಾದ ವಿಕಾಸ್ಕುತ್ತಾರ್, ಶಾಲಾ ಶಿಕ್ಷಕಿ ಶ್ರೀಮತಿ ಶೋಭಾ, ಶ್ರೀಮತಿ ಸೌಮ್ಯ , ಡಿವೈಎಫ್ಐ ಮುಖಂಡರಾದಚರಣ್ ಶೆಟ್ಟಿ ಉಪಸ್ಥಿತರಿದ್ದರು.
ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ , ಚಿತ್ರಕಲೆ,ಕ್ರಾಫ್ಟ್, ಹಾಡು, ಮಿಮಿಕ್ರಿ,ಪೆನ್ಸಿಲ್ಆರ್ಟ್, ಹಾವು-ನಾವು ಹಾವುಗಳ ಪರಿಚಯದ ವಿಶೇಷಕಾರ್ಯಕ್ರಮ,ಗೋಡೆಪತ್ರಿಕೆ, ಪರಿಸರಅದ್ಯಯನ ಮುಂತಾದ ತರಬೇತಿಗಳನ್ನು ನೀಡಲಾಯಿತು
ಸಂಪನ್ಮೂಲ ವ್ಯಕ್ತಿಗಳಾಗಿ ಕಲಾವಿದರಾದ ಜಿ ಕಂದನ್, ಪ್ರೇಮ್ನಾಥ್ ಮರ್ಣೆ, ಮೈಮ್ರಾಮ್ದಾಸ್ , ತಸ್ಲೀಮಾ ರಂಗಸ್ವರೂಪ, ಶ್ರೀಮತಿ ವಿಲ್ಮಾ, ಶ್ರೀಮತಿ ವೀಣಾ, ನಿತಿನ್ ಸುವರ್ಣ, ಉರಗತಜ್ಞರಾದ ಸ್ನೇಕ್ಜಾಯ್, ಸ್ನೇಕ್ ಪಾಪು, ಗಂಗೇಶ್ ಬೋಳಾರ್, ಸಂಯೋಜಕರಾದ ಸಂತೋಷ್ಡಿಸೋಜ,ಹನುಮಂತ, ವಾಣಿಅರುಣ್, ಶರಣ್ದೀಪ್ ಉಪಸ್ಥಿತರಿದ್ದರು.