Home Mangalorean News Kannada News ಪುತ್ತೂರು ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ

ಪುತ್ತೂರು ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ

Spread the love

ಪುತ್ತೂರು ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳಿಗೆ 3 ವರ್ಷಗಳ ಜೈಲು ಶಿಕ್ಷೆ

ಪುತ್ತೂರು: ಬಲ್ನಾಡು ಗ್ರಾಮದ ಬಬ್ಬಿಲಿಯಲ್ಲಿ 27.02.2022 ರಂದು ನಡೆದ ಕಳವು ಪ್ರಕರಣದಲ್ಲಿ, ಇಬ್ಬರು ಆರೋಪಿಗಳಿಗೆ ಮಾನ್ಯ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

A1 ಆರೋಪಿ ಮಹಮ್ಮದ್ ಆಶ್ರಫ್ ತಾರಿಗುಡ್ಡೆ ಮತ್ತು A2 ಆರೋಪಿ ಮಹಮ್ಮದ್ ಸಲಾಂ ಇವರಿಗೆ, ನವೆಂಬರ್ 29, 2025 ರಂದು ನ್ಯಾಯಾಧೀಶ ದೇವರಾಜ್ ವೈ.ಹೆಚ್ ಅವರು 3 ವರ್ಷಗಳ ಸಾದಾ ಶಿಕ್ಷೆ ಹಾಗೂ 10,000 ದಂಡ, ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 6 ತಿಂಗಳ ಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದವರು ಪೊಲೀಸ್ ನಿರೀಕ್ಷಕ ಉಮೇಶ್ ಉಪ್ಪಳ್ಳಿಗೆರವಾಗಿದ್ದು, ಪ್ರಕರಣದ ವಾದವನ್ನು ಸಹಾಯಕ ಸರ್ಕಾರಿ ಅಭಿಯೋಜಕಿ ಚೇತನಾದೇವಿ ಮಂಡಿಸಿದ್ದಾರೆ.


Spread the love

Exit mobile version