Home Mangalorean News Kannada News ಪೋಲಿಸರಿಗೆ ಬೆದರಿಕೆ ಹಾಕಿದ ಸಂಸದ ನಳಿನ್ ಮೇಲೆ ಕ್ರಮ ಕೈಗೊಳ್ಳಿ: ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್...

ಪೋಲಿಸರಿಗೆ ಬೆದರಿಕೆ ಹಾಕಿದ ಸಂಸದ ನಳಿನ್ ಮೇಲೆ ಕ್ರಮ ಕೈಗೊಳ್ಳಿ: ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ

Spread the love

ಪೋಲಿಸರಿಗೆ ಬೆದರಿಕೆ ಹಾಕಿದ ಸಂಸದ ನಳಿನ್ ಮೇಲೆ ಕ್ರಮ ಕೈಗೊಳ್ಳಿ: ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ

ಮಂಗಳೂರು : ಬಿಜೆಪಿಯ ಮಂಗಳೂರು ಚಲೋ ಹಿನ್ನೆಲೆಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಂಗಳೂರು ನಗರದ ಕದ್ರಿ  ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಮಾರುತಿ ನಾಯಕ್ ರವರಿಗೆ ಸಾರ್ವಜನಿಕವಾಗಿ ದೌರ್ಜನ್ಯವನ್ನು ಎಸಗಿದ್ದಾರೆ ಹಾಗೂ ನಿನ್ನ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂದಗೆ ಕರೆ ನೀಡುತ್ತೇನೆ ಎಂದು ಬೆದರಿಕೆ ಹಾಕಿದ ಸಂಸದರ ವರ್ತನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಕಟುವಾಗಿ ಖಂಡಿಸಿದ್ದಾರೆ.

   ಜಿಲ್ಲಾಡಳಿತ ಯಾವುದೇ ಅನುಮತಿ ನೀಡದೆ ಇದ್ದರು ಅದೇಶವನ್ನು ಧಿಕ್ಕರಿಸಿ ಇಂತಹ ರಾಲ್ಯಿ  ಕಾರ್ಯಕ್ರಮವನ್ನು ಮಾಡುವುದರ ಮೂಲಕ ಸಂಸದರು ಗೂಂಡವರ್ತನೆ ಮಾಡುತ್ತಿದ್ದಾರೆ ಇವರ ದಬ್ಬಾಳಿಕೆ ಇದೇ ಮೂದಲಲ್ಲ  ಕೋಣಾಜೆ ಠಾಣೆಯಲ್ಲಿ ಜಿಲ್ಗೆಗೆ ಬೆಂಕಿ ಇಡುತ್ತೇವೆ ಎಂದು ಹೇಳಿಕೆ ಕೋಟ್ಟ ಸಂಸದರು,ಇಂತಹ ದೊಡ್ಡ ಹುದ್ದೆಯಲ್ಲಿ ಇದ್ದುಕೊಂಡು ಜಿಲ್ಲೆಯಲ್ಲಿ ಶಾಂತಿಯನ್ನು ಕಾಪಾಡುವ ಬದಲು ಅಶಾಂತಿಯನ್ನು ಸೃಷ್ಟಿಸಿದ್ದಾರೆ. ಅತಿಯಾಗಿ ಕಷ್ಟಪಟ್ಟು ಕಲಿತು ಪೋಲಿಸ್ ಹುದ್ದೆಯನ್ನು ಪಡೆದು ಕಾನೂನು ಕಾಪಾಡುವ ಕೆಲಸವನ್ನು ಮಾಡುತ್ತಿರುವವರ ಮೇಲೆ ಒರ್ವ ಸಂಸದರಾಗಿ ಇಂತಹ ಗೂಂಡಾಗಿರಿ ಪ್ರದರ್ಶಿಸಿರುವುದು ನಿಜಕ್ಕೂ ಖಂಡನೀಯ

    ಜಿಲ್ಲೆಯಲ್ಲಿ ಶಾಂತಿ ನೆಲೆಸುವ ಸಂದರ್ಭದಲ್ಲಿ ಇಂತಹ ರಾಲ್ಯಿ  ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಮಾಡದೆ ನಿಲ್ಲಿಸಬೇಕು. ಸಂಸದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ  ಜಿಲ್ಲಾ ಯುವ ಜೆಡಿಎಸ್ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ


Spread the love

Exit mobile version