
ಪ್ರಚೋದನಾಕಾರಿ ಭಾಷಣ ಮಾಡಿದ ಶರಣ್ ಪಂಪ್ವೆಲ್ ವಿರುದ್ದ ಪ್ರಕರಣ ದಾಖಲಿಸಿ – ಎಸ್ ಡಿ ಪಿ ಐ
ಮಂಗಳೂರು: ಫಾಝಿಲ್ ಹತ್ಯೆಯ ಸೂತ್ರಧಾರ ಹಾಗೂ ಪ್ರಚೋದನಕಾರಿ ಭಾಷಣ ಮೂಲಕ ಕುಖ್ಯಾತಿ ಪಡೆದು ಜಿಲ್ಲೆಯಲ್ಲಿ ಹಲವಾರು ಗಲಭೆ, ಗುಂಪು ಹಲ್ಲೆ, ಕೊಲೆಗಳಿಗೆ ಕಾರಣಕರ್ತನಾಗಿರುವ ದ.ಕ ಜಿಲ್ಲೆ ಕಂಡ ಕ್ರಿಮಿನಲ್ ಹಿನ್ನಲೆಯ ಸಂಘಪರಿವಾರದ ನಾಲಾಯಕ್ ನಾಯಕ ಶರಣ್ ಪಂಪ್ವೆಲ್ ಎಂಬ ಕೋಮು ಕ್ರಿಮಿಯು ತುಮಕೂರಿನಲ್ಲಿ ಫಾಝಿಲ್ ಕೊಲೆಯನ್ನು ಸಮರ್ಥಿಸಿದಲ್ಲದೇ ಇನ್ನಷ್ಟು ವಂಶ ಹತ್ಯೆಗೆ ಪ್ರಚೋದನೆ ನಡೆಸುವ ರೀತಿಯಲ್ಲಿ ಬಾಷಣ ಮಾಡಿದ ಈತನ ವಿರುದ್ಧ ಕೇಸ್ ದಾಖಲಿಸಿ ಬಂದನ ಯಾಕೆ ನಡೆಸಿಲ್ಲ ಎಂದು ಎಸ್ಡಿಪಿಐ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಗೊಳಿಸಿರುವ ಅವರು ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಅದಕ್ಕೆ ಸಂಬಂಧವೇ ಇಲ್ಲದ ಸುರತ್ಕಲ್ ಫಾಝಿಲ್ ಹತ್ಯೆ ಮಾಡಲಾಯಿತು, ಫಾಝಿಲ್ ಕುಟುಂಬವೂ ಈ ಹತ್ಯೆಯ ಹಿಂದೆ ಇದೇ ಶರಣ್ ಪಂಪ್ವೆಲ್ ನ ಕೈವಾಡ ಇದೆಯೆಂದು ಬಹಿರಂಗವಾಗಿ ಹೇಳಿದ್ದರೂ ಕೂಡ ಪೆÇೀಲಿಸ್ ಇಲಾಖೆ ಅದ್ಯಾವುದನ್ನು ಗಣನೆಗೆ ತೆಗೆದುಕೊಳ್ಳದೆ ಈ ಕೋಮು ಕ್ರಿಮಿಯನ್ನು ಕೇಸ್ ನಿಂದ ಬಚಾವ್ ಗೊಳಿಸಿ ಸ್ವಚ್ಛಂದವಾಗಿ ಬಿಟ್ಟಿರುವುದೇ ಈತ ಸಂಘ ಪರಿವಾರದ ಸಂಸೃತಿಯನ್ನು ಮುಂದುವರೆಸಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದಲ್ಲಿ ಮಂಗಳೂರಿನಲ್ಲಿ ನಡೆದ ಹಲವಾರು ಅಮಾಯಕರ ಹಿಂದು ಮುಸ್ಲಿಮ್ ಯುವಕರ ಕೊಲೆಗಳ ಹಿಂದಿನ ಸತ್ಯ ಬಯಲಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತ ಮಾತೆ, ದೇಶ ಭಕ್ತರು, ಬೇಟೀ ಬಚಾವೋ, ಲವ್ ಜಿಹಾದ್ ಎಂದು ಸದಾ ಬೊಗಳೆ ಬಿಡುವ ಸಂಘಪರಿವಾರದ ಸಂಸೃತಿಯೇ ಇದು ಮತ್ತು ಇದಕ್ಕಿಂತ ಕಡೆ ಆಗಿರುವುದರಿಂದ ಈತನ ಭಾಷಣದಿಂದ ಆಶ್ಚರ್ಯ ಪಡಬೇಕಾದ ವಿಚಾರವಲ್ಲ, ಇಂತಹ ಭಾಷಣ ಸಂಘಿ ನಾಯಕರಿಂದ ಇದೇ ಮೊದಲಲ್ಲ ಹಾಗೂ ಇದುವೇ ಅಂತ್ಯವಲ್ಲ ಎಂಬುದು ಕೂಡ ವಾಸ್ತವವಾಗಿದೆ. ಯಾಕೆಂದರೆ ಇಂತಹ ಬೀದಿ ಗೂಂಡಾಗಳನ್ನು ಅಶಾಂತಿ ಹಬ್ಬಿಸಲು ಬೀದಿಗೆ ಬಿಟ್ಟು ನಂತರ ವಿರೋಧ ಪಕ್ಷಗಳ ಒತ್ತಾಯಕ್ಕೆ ಮಣಿದು ಸಣ್ಣಪುಟ್ಟ ಕೇಸ್ ದಾಖಲಿಸಿದರೂ ನಂತರ ದೇಶಭಕ್ತಿಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ಪ್ಕರಣವನ್ನು ವಾಪಾಸ್ ಪಡೆದು ಇವರನ್ನು ಪುನಃ ಬೀದಿಗೆ ಬಿಡುವುದು ಇಲ್ಲಿಯ ತನಕ ನಡೆದು ಬಂದ ಬಿಜೆಪಿ ಸರ್ಕಾರದ ಹೀನ ಸಂಸೃತಿಯಾಗಿದೆ. ಇಂತಹವರ ಉಪಟಲ ಹೆಚ್ಚದ ಸಂದರ್ಭದಲ್ಲಿ ಯಾರದ್ದೋ ಕೈಯಲ್ಲಿ ಇಂತವರ ಮೇಲೆ ಪ್ರತೀಕಾರದ ದಾಳಿಯಾದಾಗ ಅದರ ಹೆಸರಿನಲ್ಲಿ ಪುನಃ ಕೋಮು ಗಲಭೆ ನಡೆಸುವುದು ಬಿಜೆಪಿಯು ಇಲ್ಲಿಯ ತನಕ ನಡೆಸಿಕೊಂಡು ಬಂದ ನಿಯಮವಾಗಿದೆ.
ಒಂದು ವೇಳೆ ಪೆÇೀಲಿಸ್ ಇಲಾಖೆ ಇಂತಹವರನ್ನು ಹದ್ದು ಬಸ್ತಿನಲ್ಲಿಟ್ಟು ಶಾಂತಿ ಕಾಪಾಡದಿದ್ದರೆ ಸಾರ್ವಜನಿಕರೇ ಕಾನೂನನ್ನು ಕೈಗೆತ್ತಿಕೊಳ್ಳುವ ಅಪಾಯವಿದೆ ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಈತನ ವಿರುದ್ಧ ಪೆÇೀಲಿಸ್ ಇಲಾಖೆ ಸುಪ್ರೀಂ ಕೋರ್ಟ್ ಆದೇಶದಂತೆ ಸುಮೊಟೊ ಕೇಸ್ ದಾಖಲಿಸಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಈತನನ್ನು ಸೇರಿಸಿ ಈತನ ಮಂಪರು ಪರೀಕ್ಷೆ ನಡೆಸಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.