
Spread the love
ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಧಾರ್ಮಿಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ
ಬಿಕರ್ನಕಟ್ಟೆಯ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಅಚಿತಿಮ ದಿನದ ನವೇನಾ ಪೂಜಾರ್ಪಣೆಗಳು ಹಾಗೂ ಧಾರ್ಮಿಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು. ದಿನವಿಡೀ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಬಲಿಪೂಜೆಗಳಲ್ಲಿ ಹಾಗೂ ಪರಮ ಪ್ರಸಾದದ ಆರಾಧನೆಯಲ್ಲಿ ಭಾಗಿಯಾದರು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯ ಏರ್ಪಾಡು ಮಾಡಲಾಗಿತ್ತು.
ಜನವರಿ 14 ಹಾಗೂ 15 ರಂದು ಮಹೋತ್ಸವ ನಡೆಯಲಿದ್ದು ದಿನವಿಡೀ ಕೃತಜ್ಞಾರ್ಥ ಬಲಿಪೂಜೆಗಳು ನಡೆಯುವುವು. ಜನವರಿ 14ರಂದು ಸಾಯಂಕಾಲ 6.00 ಘಂಟೆಗೆ ಮಹೋತ್ಸವದ ಬಲಿಪೂಜೆಯನ್ನು ದೆಹಲಿಯ ಸಹಾಯಕ ಧರ್ಮಾಧ್ಯಕ್ಷರಾದ ವಂದನೀಯ ಬಿಷಪ್ ದೀಪಕ್ ವಲೇರಿಯನ್ ತಾವ್ರೊ ನೆರವೇರಿಸಲಿರುವರು. ಜನವರಿ 15 ರಂದು ಸಂಜೆ 6.00 ಘಂಟೆಯ ಬಲಿಪೂಜೆ ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜೆರಾಲ್, ವಂದನೀಯ ಗುರು ಮ್ಯಾಕ್ಸಿಮ್ ನೊರೊನ್ಹಾ ನೆರವೇರಿಸಲಿರುವರು.
Photo Album
Spread the love