ಬಿ. ಕೆ. ಗಣೇಶ್‍ರೈ ಯವರಿಗೆ ‘ವಿಶ್ವ ಮಾನ್ಯ ಶಿಲ್ಪ ಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

Spread the love

ಬಿ. ಕೆ. ಗಣೇಶ್‍ರೈ ಯವರಿಗೆ ‘ವಿಶ್ವ ಮಾನ್ಯ ಶಿಲ್ಪ ಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ’ ಪ್ರದಾನ

ಅರಬ್ ಸಂಯುಕ್ತ ಸಂಸ್ಥಾನದಲ್ಲಿಕಾರ್ಯೋನ್ಮುಖವಾಗಿರುವಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಅಲ್‍ಐನ್ ವಿಭಾಗದಲ್ಲಿ ಕಳೆದ 19 ವರ್ಷಗಳಿಂದ ಅನಿವಾಸಿ ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಕನ್ನಡ ಭಾಷೆ ಕಲೆ ಸಂಸ್ಕೃತಿಯನ್ನು ವೈಭವೀಕರಿಸಿ ಕೊಂಡು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ.

2023 ಮೇ 13ನೇ ತಾರೀಕಿನಂದು ಬ್ಲುರಾಡಿಸ್ಸನ್ ಹೋಟೆಲ್‍ಅಲ್‍ಐನ್ ನ ಬಾಲ್‍ರೂಂ ನಲ್ಲಿ ಮಧ್ಯಾಹ್ನ ಮೂರುಗಂಟೆಯಿಂದರಾತ್ರಿ ಹತ್ತುಗಂಟೆಯವರೆಗೆ ನಡೆದಅದ್ಧೂರಿ ಸಮಾರಂಭವನ್ನುಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯು.ಎ.ಇ.ಯಅಧ್ಯಕ್ಷರು ಹಾಗೂ ಫಾರ್ಚೂನ್‍ಗ್ರೂಪ್‍ಅಫ್ ಹೋಟೆಲ್‍ಚೇರ್ಮನ್ ಶ್ರೀ ಪ್ರವೀಣ್‍ಕುಮಾರ್ ಶೆಟ್ಟಿ ಹಾಗೂ ಎ.ಜೆ.ಗ್ರೂಪ್‍ಆಫ್ ಸ್ಕೂಲ್ಸ್‍ಚೇರ್ಮನ್ ಶ್ರೀ ಅರ್ಶದ ಶರೀಫ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದು ಕನ್ನಡ ಸಂಘದಕಾರ್ಯಕಾರಿ ಸಮಿತಿಯ ಸಮ್ಮುಖದಲ್ಲಿಜ್ಯೋತಿ ಬೆಳಗಿಸಿ ಉದ್ಘಾಟಿಸಲಾಯಿತು.

ಶ್ರೀ ಬಿ. ಕೆ. ಗಣೇಶ್‍ರೈಯವರಿಗೆ ಪ್ರತಿಷ್ಠಿತ “ವಿಶ್ವ ಮಾನ್ಯ ಶಿಲ್ಪ ಕಲಾರತ್ನಅಂತರಾಷ್ಟ್ರೀಯ ಪ್ರಶಸ್ತಿ” ಪ್ರದಾನ

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಳೆದ್ ಎರಡುವರೆ ದಶಕಗಳಿಂದ ಕ್ರಿಯಾತ್ಮಕ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿ, ಸಮಾಕ ಸೇವೆ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಶ್ರೀ ಬಿ. ಕೆ. ಗಣೇಶ್‍ರೈಯವರ ಶಿಲ್ಪ ಕಲೆ, ಚಿತ್ರ ಕಲೆ, ಲೇಖ ಬರಹಗಾರರಾಗಿ, ಕಾರ್ಯಕ್ರಮ ನಿರೂಪಕರಾಗಿ, ರಕ್ತದಾನ ಶಿಬಿರಗಳ ಆಯೋಜಕರಾಗಿ, ಸಮಾಜ ಸೇವಕರಾಗಿಇವರ ಬಹುಮುಖ ಪ್ರತಿಭೆಯನ್ನುದುಬಾಯಿ ಸರ್ಕಾರದಕಲ್ಚರಲ್ ಮಿನಿಸ್ಟ್ರಿ ಯಿಂದಕಲ್ಚರಲ್‍ಗೋಲ್ಡನ್ ವೀಸಾ ನೀಡಿ ಗೌರವಿಸಿರುವ ಗಣೇಶ್‍ರೈಯವರು ಪ್ರಸ್ಥುತದುಬಾಯಿಯಲ್ಲಿ ಅನಿವಾಸಿ ಭಾರತೀಯನಾಗಿ ನೆಲೆಸಿದ್ದಾರೆ.

ಶ್ರೀಯುತ ಗಣೇಶ್‍ರೈಯವರುತಮ್ಮಜನ್ಮಭೂಮಿ ಸುಂದರಕರ್ನಾಟಕದಕೊಡಗುಜಿಲ್ಲೆಯಲ್ಲಿ ನಿರ್ಮಿಸಿರುವ ಹಲವಾರು ಶಿಲ್ಪ ಕಲಾಕೃತಿಗಳು, ತೈಲವರ್ಣ ಜಲವರ್ಣ ಕಲಾಕೃತಿಗಳು, ಪತ್ರಿಕೆಗಳಲ್ಲಿ ಅಂಕಣಗಾರರಾಗಿ, ಹಲವಾರುದೇವತಾ ಚಿತ್ರಗಳು, ಪ್ರವಾಸಿ ಬ್ರೋಶರ್ ಗಳನ್ನು ಮುದ್ರಿಸಿ ಪ್ರಕಟಿಸಿದ್ದಾರೆ. ದುಬಾಯಿಯಲ್ಲಿ ಭಾರತ ಮತ್ತುಗಲ್ಫ್ ನಾಡಿಗೆ ಸಾಂಸ್ಕೃತಿಕವಾಗಿಕನ್ನಡ ಭಾಷೆಯನ್ನು ವೈಭವೀಕರಿಸುತ್ತಾತಮ್ಮದೇಆದಯೂಟ್ಯೂಬ್‍ಚಾನೆಲ್ ನ ಮೂಲಕ ಕನ್ನಡ ಭಾಷೆಯಲ್ಲಿ ವೈವಿಧ್ಯಮಯ ವೀಡಿಯೋಗಳನ್ನು ನಿರ್ಮಿಸಿ ಅಪ್ಲೊಡ್ ಮಾಡುತ್ತಾಕನ್ನಡ ಸೇವೆಯನ್ನು ಮಾಡುತ್ತಿರುವ ಹಾಗೂ ದುಬಾಯಿ ಸರ್ಕಾರದಕಲ್ಚರಲ್‍ಗೋಲ್ಡನ್ ವೀಸಾ ಪುರಸ್ಕೃತರಾಗಿರುವುದನ್ನು ಅಭಿನಂದಿಸಿ, ಸಮಸ್ಥ ಅನಿವಾಸಿ ಕನ್ನಡಿಗರು, ಭಾರತೀಯರ ಪರವಾಗಿ”ವಿಶ್ವ ಮಾನ್ಯ ಶಿಲ್ಪಕಲಾರತ್ನ ಅಂತರಾಷ್ಟ್ರೀಯ ಪ್ರಶಸ್ತಿ” ಪ್ರಧಾನಿಸಿ ಗೌರವಿಸಲಾಯಿತು. ಸನ್ಮಾನ ಪ್ರಕ್ರಿಯೆಯಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಪ್ರವೀಣ್‍ಕುಮಾರ್‍ಶೆಟ್ಟಿಯವರು, ಶ್ರೀ ಅರ್ಶದ್ ಶರೀಫ್ ಹಾಗೂ ಕನ್ನಡ ಸಂಘ ಅಲ್‍ಐನ್‍ಕಾರ್ಯಕಾರಿ ಸಮಿತಿಯ ಮುಖ್ಯಸ್ಥರು ಶ್ರೀ ವಿಮಲ್‍ಕುಮಾರ್, ಶ್ರೀ ಕೆ. ಬಿ. ರಮೇಶ್ ಹಾಗೂ ಸಮಿತಿಯಸದಸ್ಯರುಗಳುಪಾಲ್ಗೊಂಡಿದ್ದರು.

ಪ್ರಶಸ್ತಿ ಸನ್ಮಾನಗೌರವನ್ನು ಸ್ವೀಕರಿಸಿದ ಶ್ರೀ ಬಿ. ಕೆ. ಗಣೇಶ್‍ರೈಯವರುತಮ್ಮ ವಂದನಾ ಸಮರ್ಪಣೆಯಲ್ಲಿತಮ್ಮ ಕಲಾ ಪ್ರಯಾಣದಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಲು ಬೆಂಬಲ ಪ್ರೋತ್ಸಾಹ ನೀಡಿದ ಸರ್ವರನ್ನು ಹಾಗೂ ಕನ್ನಡ ಸಂಘ ಅಲ್‍ಐನ್ ಸಂಘಟನೆಗೆತಮ್ಮಕೃಜ್ಞತೆಯನ್ನು ಸಲ್ಲಿಸಿದರು.


Spread the love

Leave a Reply

Please enter your comment!
Please enter your name here