Home Mangalorean News Kannada News ಭಟ್ಕಳ: ಬೈಕ್ ಢಿಕ್ಕಿ; ಪಾದಾಚಾರಿಗೆ ಗಾಯ

ಭಟ್ಕಳ: ಬೈಕ್ ಢಿಕ್ಕಿ; ಪಾದಾಚಾರಿಗೆ ಗಾಯ

Spread the love

ಭಟ್ಕಳ: ಚಲಿಸುತ್ತಿದ್ದ ಮೋಟಾರ್ ಬೈಕ್‍ವೊಂದು ಪಾದಾಚಾರಿಯೋರ್ವನಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಆತ ನೆಲಕ್ಕುರುಳಿ ಗಂಭೀರವಾಗಿ ಗಾಯಗೊಂಡು ಕುಂದಾಪುರ ಆಸ್ಪತ್ರೆಗೆ ದಾಖಲಾದ ಘಟನೆ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಗಾಯಗೊಂಡ ಪಾದಾಚಾರಿಯನ್ನು ಕುಪ್ಪಯ್ಯ ದುರ್ಗಪ್ಪ ನಾಯ್ಕ (37) ಮುಂಡಳ್ಳಿ ಎಂದು ಗುರುತಿಸಲಾಗಿದೆ. ಅಪಘಾತದಿಂದಾಗಿ ಈತನ ಮುಖ ಹಾಗೂ ತಲೆಗೆ ಏಟು ತಗುಲಿದ್ದು, ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕುಂದಾಪುರ ಆಸ್ಪತ್ರೆಗೆ ಸಾಗಿಸಲಾಗಿದೆ.

ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


Spread the love

Exit mobile version