
ಭಾರತದ ಮೇಲಿನ ದಾಳಿಗಳಿಗೆ ಕಾರಣ ಆರ್ಥಿಕ ಸಮೃದ್ಧಿ – ಪ್ರಸನ್ನ ಕುಮಾರ್
ಭಾರತದ ಮೇಲಿನ ದಾಳಿಗಳಿಗೆ ಕಾರಣವೇ ಭಾರತದ ಆರ್ಥಿಕ ಸಮೃದ್ಧಿ. ಮೊದಲ ಶತಮಾನದಿಂದ 15 ನೇ ಶತಮಾನದವರೆಗೆ ಪ್ರಪಂಚದ ಉತ್ಪಾದನೆಯ ಶೇಕಡಾ 32 ಭಾರತವೊಂದರಿಂದಲೇ ಆಗಿತ್ತು ಎಂದು ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾಸಹ ಸಂಯೋಜಕ ಪ್ರಸನ್ನ ಕುಮಾರ್ ಹೇಳಿದರು.
ಇವರು ಕಂಬದಕೋಣೆ ಪದವಿ ಪೂರ್ವ ಕಾಲೇಜು ಇಲ್ಲಿ ನಡೆದ ಸ್ವಾವಲಂಬಿ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡುತ್ತ ಪ್ರಾಚೀನ ಭಾರತ ಸಮೃದ್ಧ ಆರ್ಥಿಕತೆಯಾಗಿರಲು ಕಾರಣ ಸಮಾಜದ ಪ್ರತಿಯೊಬ್ಬ ಯುವಕರು ಸ್ವಯಂ ಪ್ರೇರಿತರಾಗಿ ಉತ್ಪಾದನೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಯೊಂದು ವ್ಯಾಪಾರ, ಉದ್ಯಮ ಅಥವಾ ಕೃಷಿಯಲ್ಲಿ ಜನರು ಸ್ವಾಭಾವಿಕವಾಗಿ ಸೇರಿ ಕೊಳ್ಳುತ್ತಿದ್ದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲರಾದ ಶ್ರೀ ಗಣಪತಿ ಅವಭೃತ ಇವರು ವಹಿಸಿದ್ದರು.
ಉಡುಪಿ ಜಿಲ್ಲಾ ಸ್ವಾವಲಂಭಿ ಭಾರತ ಅಭಿಯಾನದ ಸಂಯೋಜಕರಾದ ವಿಜಯ ಕೊಡವೂರು ಉಪಸ್ಥಿತರಿದ್ದರು.
ರಾಘವೇಂದ್ರ ಬಿ.ಕೆ ಸ್ವಾಗತಿಸಿದರು. ತುಳಸಿದಾಸ್ ನಿರೂಪಿಸಿದರು. ಆ ನಂತರ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಪವರ್ ಪಾಯಿಂಟ್ ಪ್ರಸೆಂಟೇಶನ್ ತೋರಿಸಲಾಯಿತು.