ಮಂಗಳೂರಿನಲ್ಲಿ ಹಾಡು ಹಗಲೇ ದರೋಡೆಗೆ ಯತ್ನ ; ಜಾಗೃತಿಗಾಗಿ ಪೋಲಿಸ್ ಇಲಾಖೆ ನಡೆಸಿದ ಅಣಕು ಪ್ರದರ್ಶನ – ಕಮೀಷನರ್ ಶಶಿಕುಮಾರ್

Spread the love

ಮಂಗಳೂರಿನಲ್ಲಿ ಹಾಡು ಹಗಲೇ ದರೋಡೆಗೆ ಯತ್ನ ; ಜಾಗೃತಿಗಾಗಿ ಪೋಲಿಸ್ ಇಲಾಖೆ ನಡೆಸಿದ ಅಣಕು ಪ್ರದರ್ಶನ – ಕಮೀಷನರ್ ಶಶಿಕುಮಾರ್

ಮಂಗಳೂರು: ನಗರ ಪೊಲೀಸ್ ಮತ್ತು ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ರಿಜಿಸ್ಟರ್ ಮಂಗಳೂರು ರವರ ಸಹಯೋಗದಲ್ಲಿ  ಭಾನುವಾರ ಬೆಳಿಗ್ಗೆ ಸಮಯ ಸುಮಾರು 11-00 ಗಂಟೆಗೆ ಮಂಗಳೂರು ನಗರದ ಸೇಂಟ್ ಆಗ್ನೆಸ್ ಕಾಲೇಜು ಮುಂಭಾಗದಲ್ಲಿ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡದ ದುಷ್ಕರ್ಮಿಯೊಬ್ಬ ಮಹಿಳೆಯ ಬ್ಯಾಗ್ ನ್ನು ಕಸಿದುಕೊಳ್ಳಲು ಪ್ರಯತ್ನಿಸಿದಾಗ, ಮಹಿಳೆಯು ಆತನ ಮೇಲೆ ತಿರುಗಿ ಹಲ್ಲೆ ಮಾಡಿ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಘಟನೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ಅಣಕು ಕಾರ್ಯಾಚರಣೆಯಾಗಿದೆ ಎಂದು ಮಂಗಳೂರು ನಗರ ಪೊಲೀಸ್‌ ಕಮೀಷನರ್‌ ಎನ್‌ ಶಶಿಕುಮಾರ್‌ ಹೇಳಿದ್ದಾರೆ.

ಈ ಅಣುಕು ಘಟನೆಯು ಬೆಳಿಗ್ಗೆ ಸುಮಾರು 11-00 ನಿಮಿಷಕ್ಕೆ ನಡೆಸಲಾಗಿದ್ದು. ಸ್ಥಳದಲ್ಲಿದ್ದ ಸ್ಥಳೀಯರೊಬ್ಬರು ERSS – 112 ಗೆ 11-03 ನಿಮಿಷಕ್ಕೆ ಕರೆ ಮಾಡಿದ್ದು, ERSS -112 ರಕ್ಷಣಾ ವಾಹನವು ಕೂಡಲೇ ತೆರಳಿ 1-08 ನಿಮಿಷಕ್ಕೆ ಸ್ಥಳಕ್ಕೆ ದಾವಿಸಿದ್ದು, ಹಾಗೂ ಕದ್ರಿ ಪೊಲೀಸ್ ಠಾಣೆಯ ನಿರೀಕ್ಷಕರು ಮತ್ತು ಸಿಬ್ಬಂದಿಗಳು 11-18 ನಿಮಿಷಕ್ಕೆ ಸ್ಥಳಕ್ಕೆ ಭೇಟಿ ನೀಡಿರುತ್ತಾರೆ. ಮೇಲಾಧಿಕಾರಿಗಳು ಸಹ ಭೇಟಿ ನೀಡಿರುತ್ತಾರೆ.

ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಕಂಟ್ರೋಲ್ ರೂಮ್ ನವರು ನಗರಾದ್ಯಂತ ಚೆಕ್ ಪೋಸ್ಟ್ ಗಳನ್ನು ಅಲರ್ಟ್ ಮಾಡಿದ್ದಲ್ಲದೇ ಸಂಶಯಾಸ್ಪದ ವಾಹನವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಯಶಸ್ವಿಯಾಗಿರುತ್ತಾರೆ. ಈ ಘಟನಾ ಸಂಧರ್ಭದಲ್ಲಿ ಸ್ಥಳದಲ್ಲಿದ್ದ ರಿಕ್ಷಾ ಚಾಲಕರು ಹಾಗೂ ಆಗ್ನೆಸ್ ಕಾಲೇಜು ಮುಂಭಾಗ ನಡೆದುಕೊಂಡು ಹೋಗುತ್ತಿದ್ದ ಮಹಿಳಾ ಹಾಗೂ ಪುರುಷ ಪಾದಾಚಾರಿಯವರು ಈ ಅಣುಕು ದುಷ್ಕರ್ಮಿಗಳ ಹಾಗೂ ಅವರಿದ್ದ ವಾಹನವನ್ನು ತಡೆಯುವ ಮತ್ತು ಗುರುತು ಹಚ್ಚುವಲ್ಲಿ ಹಾಗೂ ಕಾರನ್ನು ಹಿಂಬಾಲಿಸುವ ಪ್ರಯತ್ನವನ್ನು ಮಾಡಿರುವುದು ಸಹ ಅಭಿನಂದನಾರ್ಹವಾಗಿರುತ್ತದೆ ಎಂದು ಅವರು ತಿಳಿದ್ದಾರೆ

ಸದ್ರಿ ವಾಹನವನ್ನು ಸಾರ್ವಜನಿಕರು ಮೋಟಾರು ಸೈಕಲ್ ಹಾಗೂ 1 ಕಾರಿನಲ್ಲಿ 2 ಹಿಂಬಾಲಿಸಿಕೊಂಡು ಬಂದು ದುಷ್ಕರ್ಮಿಯ ಚಹರೆ ಹಾಗೂ ವಾಹನದ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದು, ಮುಂದೆ ಸಿಗ್ನಲ್ ಬಳಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ದುಷ್ಕರ್ಮಿಗಳ ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಳ್ಳುವಲ್ಲಿ ಸಹಕರಿಸಿರುತ್ತಾರೆ.

ಸಿಸಿಟಿವಿ ಫೂಟೇಜ್ ಗಳನ್ನು ಪರಿಶೀಲಿಸಲಾಗಿ ಸಾರ್ವಜನಿರೊಬ್ಬರು ತಮ್ಮ ಕಾರನ್ನು ದುಷ್ಕರ್ಮಿಗಳ ಕಾರಿಗೆ ಅಡ್ಡಲಾಗಿ ನಿಲ್ಲಿಸಲು ಪ್ರಯತ್ನಿಸಿದ್ದು ಕೂಡಾ ಅಭಿನಂದನಾರ್ಹವಾಗಿದ್ದು ಅವರನ್ನು ಪತ್ತೆ ಹಚ್ಚಿ ಅವರಿಗೆ ಅಭಿನಂದಿಸಲಾಗುವುದು.

ಒಟ್ಟಿನಲ್ಲಿ ಮಂಗಳೂರು ನಗರದಲ್ಲಿ ಈ ಅಣುಕು ಕಾರ್ಯಾಚರಣೆಯಲ್ಲಿ ದುಷ್ಕರ್ಮಿಗಳು ಒಂಟಿ ಮಹಿಳೆಯ ಮೇಲೆ ಹಲ್ಲೆ ನಡೆಸಿದಾಗ, ಮಹಿಳೆಯು ದುಷ್ಕರ್ಮಿಗಳ ಮೇಲೆ ಮರುಹಲ್ಲೆ ನಡೆಸಿ ತನ್ನನ್ನು ಸ್ವರಕ್ಷಣೆ ಮಾಡಿಕೊಳ್ಳುವ ಕಾರ್ಯಸಿದ್ಧತೆ, ERSS-112 ಮತ್ತು ಪೊಲೀಸರ ತುರ್ತು ಪ್ರತಿಕ್ರಿಯೆ ಇಂತಹ ಸಂದರ್ಭದಲ್ಲಿ ಕೃತ್ಯದ ಸ್ಥಳದಲ್ಲಿ ಸಾರ್ವಜನಿಕರಿಂದ ತುರ್ತು ಸಹಾಯದ ಕಾಯ ಕುರಿತು ಪುನರಾವಲೋಕನ ಯಶಸ್ವಿಯಾಗಿರುವುದು ಸಿಸಿಟಿವಿ ಫೂಟೇಜ್ ಗಳಿಂದ ಧೃಢಪಟ್ಟಿರುತ್ತದೆ.

ಶ್ರೀಮತಿ ಶೋಭಲತಾ ಕಟೀಲ್ ರವರ ಮಾಲಕತ್ವದ ಸ್ವರಕ್ಷಾ ಫಾರ್ ವುಮೆನ್ ಟ್ರಸ್ಟ್ ರಿಜಿಸ್ಟರ್ಡ್‌ ಮಂಗಳೂರು ರವರ ಸಹಯೋಗದೊಂದಿಗೆ ನಡೆಸಿರುವ ಅಣುಕು ಕಾರ್ಯಚರಣೆ ಯಶಸ್ವಿಯಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.


Spread the love