Home Mangalorean News Kannada News ಮಂಗಳೂರು | ನೂತನ ಸಚಿವ ಯು.ಟಿ.ಖಾದರ್ ಗೆ ಆದರದ ಸ್ವಾಗತ

ಮಂಗಳೂರು | ನೂತನ ಸಚಿವ ಯು.ಟಿ.ಖಾದರ್ ಗೆ ಆದರದ ಸ್ವಾಗತ

Spread the love

ಮಂಗಳೂರು | ನೂತನ ಸಚಿವ ಯು.ಟಿ.ಖಾದರ್ ಗೆ ಆದರದ ಸ್ವಾಗತ

ಮಂಗಳೂರು: ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ರವಿವಾರ ಆಗಮಿಸಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದರು.

ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವ ಖಾದರ್ ಅವರನ್ನು ಪಕ್ಷದ ಧುರೀಣರು, ಕಾರ್ಯಕರ್ತರು, ಅಭಿಮಾನಿಗಳು ಹಾರಾರ್ಪಣೆಗೈದು, ಹೂಗುಚ್ಚ ನೀಡಿ ಸ್ವಾಗತಿಸಿದರು.

ಬಳಿಕ ಸಚಿವ ಖಾದರ್ ಅವರು ಉಳ್ಳಾಲ ಸಯ್ಯದ್ ಮದನಿ ದರ್ಗಾ ಶರೀಫ್, ಉಳ್ಳಾಲ ಶ್ರೀ ಭಗವತಿ ಕ್ಷೇತ್ರ, ತೊಕ್ಕೊಟು ಸಂತ ಸೆಬಾಸ್ಟಿಯನ್ ಚರ್ಚ್ ಗೆ ಭೇಟಿ ನೀಡಿದರು.


Spread the love

Exit mobile version