ಮಕ್ಕಳಿಗಾಗಿ ಬಾಲವಿಹಾರ ಬೇಸಿಗೆ ಶಿಬಿರ
ಚಿನ್ಮಯ ಮಿಷನ್, ಮಂಗಳೂರು ಇವರು 2026ರ ಏಪ್ರಿಲ್ 3ರಿಂದ ಏಪ್ರಿಲ್ 12ರವರೆಗೆ ಚಿನ್ಮಯ ಮಿಷನ್, ಶಾರದ ಸನ್ನಿಧಿ, ರೊಸಾರಿಯೋ ಚರ್ಚ್ ರೋಡ್, ಹೊಯ್ಗೆ ಬಜಾರ್ ನಲ್ಲಿ ಮಹಾಭಾರತದ ಕಥೆಗಳು ಈ ವಿಷಯದ ಕುರಿತು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.
ಮಹಾಭಾರತದ ಕುರಿತು ವಿಭಿನ್ನ ಕಥೆಗಳು ಮತ್ತು ಪಾತ್ರಗಳ ಮೂಲಕ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸುವ ಗುರಿಯನ್ನು ಹೊಂದಿರುವ ಈ ಬೇಸಿಗೆ ಶಿಬಿರ, ಇದರ ಜೊತೆಗೆ ಭಗವದ್ಗೀತೆ ಮತ್ತು ಭಜನೆಗಳನ್ನು ಮಕ್ಕಳಿಗಾಗಿ (ವಯೋಮಿತಿ 6 ರಿಂದ 13 ವರ್ಷ) ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೂಪಾ ರಾಣಿ @ 9449388532 ಇವರನ್ನು ಸಂಪರ್ಕಿಸಬಹುದು.
