ಮಣಿಪುರ ಸಂತ್ರಸ್ತರಿಗೆ ಆಳ್ವಾಸ್ ಸಹಾಯಧನ

Spread the love

ಮಣಿಪುರ ಸಂತ್ರಸ್ತರಿಗೆ ಆಳ್ವಾಸ್ ಸಹಾಯಧನ

ವಿದ್ಯಾಗಿರಿ: ಮಣಿಪುರದಲ್ಲಿ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೆರವು ನೀಡಲಾಯಿತು.

ಕಾಲೇಜಿನಲ್ಲಿ ನಡೆದ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಸಂಗ್ರಹಿಸಿದ ಸುಮಾರು 1 ಲಕ್ಷ ರೂಪಾಯಿಯನ್ನು ವಿವಿಧ ಪರಿಹಾರ ಶಿಬಿರಗಳಿಗೆ ಮತ್ತು ರಾಜ್ಯದ ಬಿಸ್ನುಪುರ್ ಜಿಲ್ಲೆ (ಮೊಯಿರಾಂಗ್ ನ್ಯಾಯವ್ಯಾಪ್ತಿಯಲ್ಲಿರುವ ಕುಂಬಿ ಪ್ರದೇಶ), ತೌಬಲ್ ಜಿಲ್ಲೆ ಮತ್ತು ಕಾಕ್ಚಿಂಗ್ ಜಿಲ್ಲೆಯ ಹಾಲಿ ಗ್ರಾಮಗಳಿಗೆ ವಿತರಿಸಲಾಯಿತು.

7 ಪರಿಹಾರ ಶಿಬಿರಗಳಿಗೆ ತಲಾ 10 ಸಾವಿರ ರೂಪಾಯಿ, 2 ಮುಂಚೂಣಿ ಗ್ರಾಮ ರಕ್ಷಣಾ ಸಂಸ್ಥೆಗೆ ತಲಾ 10 ಸಾವಿರ ರೂಪಾಯಿ ಮತ್ತು 3 ಸ್ಥಳಗಳಿಗೆ ಆಲೂಗಡ್ಡೆ, ಸಕ್ಕರೆ, ಅಡುಗೆ ಎಣ್ಣೆ, ಟೂತ್ ಬ್ರμï, ಮಸೂರ, ನೀರಿನ ಬಾಟಲಿ ಇತ್ಯಾದಿ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಮಿಜಾರಿನ ಇಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಜರುಗಿದ ಆಳ್ವಾಸ್ ಟ್ರೆಡಿಷನಲ್ ಡೇ ಸಂಧರ್ಭದಲ್ಲಿ ಹತ್ತಕ್ಕೂ ಅಧಿಕ ಆಹಾರ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ಆ ಸಂಧರ್ಭದಲ್ಲಿ ವಿವಿಧ ಮಳಿಗೆಗಳಿಂದ ಗಳಿಸಿದ ಲಾಭವನ್ನು ಒಟ್ಟು ಗೂಡಿಸಿ ಮಣಿಪುರ ಸಂತ್ರಸ್ತರಿಗೆ ಸಹಾಯಧನದ ರೂಪದಲ್ಲಿ ನೀಡಲಾಗಿದೆ.


Spread the love