
Spread the love
ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ವರ್ಗಾವಣೆ – ಚನ್ನಬಸಪ್ಪ ನೂತನ ಆಯುಕ್ತ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಆಯುಕ್ತರಾಗಿದ್ದ ಅಕ್ಷಯ್ ಶ್ರೀಧರ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರ ವರ್ಗಾವಣೆ ಮಾಡಿದೆ.
ತುಮಕೂರು ಜಿಲ್ಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೆಎಎಸ್ ಅಧಿಕಾರಿ ಚನ್ನಬಸಪ್ಪ.ಕೆ ಮುಂದಿನ ಆದೇಶದವರೆಗೆ ಮನಪಾ ಆಯುಕ್ತರಾಗಿ ಸರಕಾರ ನಿಯುಕ್ತಿಗೊಳಿಸಿದೆ.
2017ರ ಬ್ಯಾಚ್ನ ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್ ಅವರನ್ನು 2020ರಲ್ಲಿ ಎಂಸಿಸಿ ಕಮಿಷನರ್ ಆಗಿ ನೇಮಿಸಲಾಯಿತು.
Spread the love