ಮಹಿಳಾ ದಿನಾಚರಣೆ : ಶಾಂತಾ ವಿ. ಆಚಾರ್ಯ ರವರಿಗೆ ಸನ್ಮಾನ

Spread the love

ಮಹಿಳಾ ದಿನಾಚರಣೆ : ಶಾಂತಾ ವಿ. ಆಚಾರ್ಯ ರವರಿಗೆ ಸನ್ಮಾನ

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ  ಶಾಂತಾ ವಿ ಆಚಾರ್ಯ ರವರಿಗೆ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಮಾತನಾಡಿ ಶಾಂತಾ ವಿ. ಆಚಾರ್ಯ ರವರು ಸಾಮಾಜಿಕ ಕಾರ್ಯಕರ್ತೆಯಾಗಿ, ನಗರ ಸಭೆ ಸದಸ್ಯರಾಗಿ ಸಾಮಾಜಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಕಾರ್ಯವೈಖರಿಯ ಮೂಲಕ ಗುರುತಿಸಿಕೊಂಡಿದ್ದಾರೆ. ಗೈಡ್ಸ್ ಸಂಸ್ಥೆಯ ರಾಜ್ಯ ಆಯುಕ್ತರಾಗಿ ಸೇವೆ ಸಲ್ಲಿಸಿ, ರಾಜ್ಯ ಕಂಡ ಶ್ರೇಷ್ಠ ರಾಜಕೀಯ ಮುತ್ಸದ್ದಿ ದಿ| ವಿ. ಎಸ್. ಆಚಾರ್ಯ ರವರ ಎಲ್ಲಾ ಕಾರ್ಯ ಚಟುವಟಕೆಗಳಿಗೆ ಸಹಧರ್ಮಿಣಿಯಾಗಿ ಪ್ರೋತ್ಸಾಹಿಸುವ ಮೂಲಕ ನಮಗೆಲ್ಲಾ ಆದರ್ಶಪ್ರಾಯರಾಗಿರುವ ಶಾಂತಾ ವಿ ಆಚಾರ್ಯರನ್ನು ಬ್ಯಾಂಕಿನ ವತಿಯಿಂದ ಗೌರವಿಸಲು ಹೆಮ್ಮೆ ಎನಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿರ್ದೇಶಕರಾದ  ನಾರಾಯಣ ಟಿ. ಅಮೀನ್,  ವಿನಯ ಕರ್ಕೇರ,  ವನಜ ಪುತ್ರನ್, ಬ್ಯಾಂಕಿನ ವ್ಯವಸ್ಥಾಪನಾ ನಿರ್ದೇಶಕ  ಜಗದೀಶ್ ಮೊಗವೀರ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ  ಶಾರಿಕಾ ಕಿರಣ್, ಸಿಬ್ಬಂದಿ  ವಿಜೇತ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here