ರೋಲ್ಸ್-ರಾಯ್ಸ್ ನಲ್ಲಿ ಉದ್ಯೋಗ ಗಿಟ್ಟಿಸಿದ ರಿತು ಪರ್ಣರಿಗೆ ಪರಿಷತ್ ಸದಸ್ಯ ಭೋಜೆಗೌಡ ಅಭಿನಂದನೆ
ಮಂಗಳೂರು: ವಿಶ್ವದ ಪ್ರತಿಷ್ಠಿತ ರೋಲ್ಸ್-ರಾಯ್ಸ್ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ತುಳುನಾಡಿನ ಮಂಗಳೂರು ಯೆಯ್ಯಾಡಿಯ ವ್ಯಾಸನಗರ ನಿವಾಸಿ ಸುರೇಶ್ ಹಾಗೂ ಗೀತಾ ದಂಪತಿಗಳ ಪುತ್ರಿ ಕು. ರಿತು ಪರ್ಣ ಅವರ ಮನೆಗೆ ವಿಧಾನ ಪರಿಷತ್ ಶಾಸಕರಾದ ಎಸ್ ಎಲ್ ಭೋಜೇಗೌಡ ರವರು ಭೇಟಿ ನೀಡಿ,ಸನ್ಮಾನಿಸಿ ಅಭಿನಂದನೆ ತಿಳಿಸಿದರು ಹಾಗೂ ಮುಂದಿನ ಭವಿಷ್ಯ ಇದೇ ರೀತಿ ಯಶಸ್ಸು ಕಾಣಲಿ ಎಂಬ ಶುಭ ಹಾರೈಸಿದರು.
ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಮಂಗಳೂರು ಪ್ರಾಂಶುಪಾಲ ವಿಠಲ ಅಬುರ ,, ಯುವ ಜೆಡಿಎಸ್ ಪಧಾದಿಕಾರಿಗಳಾದ ರತೀಶ್ ಕರ್ಕೇರ, ನಿತೇಶ್ ಪೂಜಾರಿ, ಆದರ್ಶ್ ಸುಧಾಕರ್, ಭಾರತ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು