ವೀಣಾ ವಿನೋದಿನಿ ವಿದುಷಿ ಪವನ.ಬಿ.ಆಚಾರ್ ಅವರಿಗೆ  ಕಿತ್ತೂರು ರಾಣಿ ಚೆನ್ನಮ್ಮ ಕಲಾವಿಭಾಗದ ಪ್ರಶಸ್ತಿ

Spread the love

ವೀಣಾ ವಿನೋದಿನಿ ವಿದುಷಿ ಪವನ.ಬಿ.ಆಚಾರ್ ಅವರಿಗೆ  ಕಿತ್ತೂರು ರಾಣಿ ಚೆನ್ನಮ್ಮ ಕಲಾವಿಭಾಗದ ಪ್ರಶಸ್ತಿ

ಉಡುಪಿ: ವೀಣಾ ವಿನೋದಿನಿ ವಿದುಷಿ ಪವನ.ಬಿ.ಆಚಾರ್ ಅವರಿಗೆ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ಕಲಾವಿಭಾಗದ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮಣಿಪಾಲದ ಬಹುಮುಖ ಪ್ರತಿಭೆ,27ವರ್ಷಗಳಿಂದ ಕಲಾಸ್ಪಂದನ ಮತ್ತು ವಿಪಂಚಿ ಬಳಗದ ನಿರ್ದೇಶಕರಾದ ವೀಣಾ ವಿನೋದಿನಿ ವಿದುಷಿ ಪವನ.ಬಿ.ಆಚಾರ್ ಅವರು ವೀಣಾವಾದನದ ವಿಶಿಷ್ಟ ಪ್ರಯೋಗಗಳಿಂದ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುವಲ್ಲಿ ಮಾಡಿದ ಸಾಧನೆಗಾಗಿ ಕರ್ನಾಟಕ ಸರಕಾರವು ಕೊಡಮಾಡುವ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮಾ ಕಲಾವಿಭಾಗದ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳಾದ ಎಸ್ ಆರ್ ಬಸವರಾಜ ಬೊಮ್ಮಾಯಿ ಅವರಿಂದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪಡೆದುಕೊಂಡರು.


Spread the love

Leave a Reply

Please enter your comment!
Please enter your name here