ಸಿದ್ದರಾಮಯ್ಯ ಕುರಿತು ಅಶ್ವತ್ಥನಾರಾಯಣ ಅವರ ಹೇಳಿಕೆ ಖಂಡನೀಯ : ಭಾಸ್ಕರ್ ರಾವ್ ಕಿದಿಯೂರು

Spread the love

ಸಿದ್ದರಾಮಯ್ಯ ಕುರಿತು ಅಶ್ವತ್ಥನಾರಾಯಣ ಅವರ ಹೇಳಿಕೆ ಖಂಡನೀಯ : ಭಾಸ್ಕರ್ ರಾವ್ ಕಿದಿಯೂರು

ಉಡುಪಿ: ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆದು ಹಾಕಬೇಕು ಎಂಬ ಉನ್ನತ ಶಿಕ್ಷಣ ಸಚಿವ ಡಾ | ಅಶ್ವತ್ಥನಾರಾಯಣ ಅವರ ಹೇಳಿಕೆ ಅಘಾತಕಾರಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ.

ದೇವಾಲಯದ ಆವರಣದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಜನರನ್ನು ಈ ರೀತಿ ಹಿಂಸೆಗೆ ಪ್ರಚೋದಿಸುವ ಬಿಜೆಪಿ ಸಚಿವರ ಹೇಳಿಕೆ ಹತಾಸೆಯಿಂದಾಗಿದ್ದು ˌಭ್ಯಷ್ಟಾಚಾರˌ ಸ್ವಜನಪಕ್ಷಪಾತˌ ಸುಳ್ಳು ಹೇಳಿಕೆಗಳಿಂದ ಜನರು ಬಿಜೆಪಿ ಆಡಳಿತದಲ್ಲಿ ಈಗಾಗಲೇ ಭ್ರಮನಿರಸನಗೊಂಡಿದ್ದು ಮುಂದಿನ ಅವಧಿಗೆ ತಮಗೆ ಬಹುಮತ ಬರಲಾರದು ಎಂಬ ಅರಿವಿನಿಂದಲೇ ಬಿಜೆಪಿಯು ಜನರನ್ನು ಪ್ರಚೋದಿಸುವ ಷಡ್ಯಂತ್ರ ರೂಪಿಸುತ್ತಿದೆ
ˌ
ಸಿದ್ದರಾಮಯ್ಯನವರು ಎಲ್ಲರನ್ನೂ ಪ್ರೀತಿಸುವ ˌಎಲ್ಲರನ್ನೂ ಗೌರವಿಸುವ ಗುಣವನ್ನು ಹೊಂದಿದವರು ˌಅವರ ಆಡಳಿತಾವಧಿಯಲ್ಲಿ ಎಲ್ಲಾ ವರ್ಗಗಳನ್ನು ಗಮನದಲ್ಲಿರಿಸಿಕೊಂಡು ಯೋಜನೆಗಳನ್ನು ರೂಪಿಸಿರುತ್ತಾರೆˌಹಾಗೂ ದೇಶಕ್ಕಾಗಿ ಕೊಡುಗೆ ನೀಡಿದ ಎಲ್ಲಾ ವರ್ಗಗಳ ಮಹಾ ಪುರುಷರುಗಳನ್ನು ಗೌರವಿಸುತ್ತಾರೆˌ ಬಿಜೆಪಿ ಮುಖಂಡರು ಯಾವಾಗಲೂ ಟಿಪ್ಪುˌ ಮುಸ್ಲೀಂˌ ಪಾಕಿಸ್ತಾನ ಎಂಬ ಜಪದಲ್ಲಿಯೇ ಕಾಲಹರಣ ಮಾಡುತ್ತಾರೆ ದೇಶದ ಅಭಿವೃದ್ಧಿಯ ಬಗ್ಗೆ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ಚಿಂತಿಸದಿರುವುದು ದೌರ್ಭಾಗ್ಯ ಎಂದು ಸಚಿವರ ಪ್ರಚೋದನಾಕಾರಿ ಭಾಷಣಕ್ಕೆ ಕಿದಿಯೂರು ಪ್ರತಿಕ್ರಿಯಿಸಿದ್ದಾರೆ ˌ


Spread the love