Home Mangalorean News Kannada News ಸೆ.22 ರಿಂದ ಅ.2 ರ ವರೆಗೆ ಅದ್ಧೂರಿ ಮಂಗಳೂರು ದಸರಾ ; ಕುದ್ರೋಳಿ ಕ್ಷೇತ್ರದಲ್ಲಿ ಭರದ...

ಸೆ.22 ರಿಂದ ಅ.2 ರ ವರೆಗೆ ಅದ್ಧೂರಿ ಮಂಗಳೂರು ದಸರಾ ; ಕುದ್ರೋಳಿ ಕ್ಷೇತ್ರದಲ್ಲಿ ಭರದ ಸಿದ್ಧತೆ 

Spread the love

ಸೆ.22 ರಿಂದ ಅ.2 ರ ವರೆಗೆ ಅದ್ಧೂರಿ ಮಂಗಳೂರು ದಸರಾ ; ಕುದ್ರೋಳಿ ಕ್ಷೇತ್ರದಲ್ಲಿ ಭರದ ಸಿದ್ಧತೆ 

ಮಂಗಳೂರು: ಸೆ.22 ರಿಂದ ಅ.2 ರ ವರೆಗೆ ಕುದ್ರೋಳಿ ಕ್ಷೇತ್ರದಲ್ಲಿ ಅದ್ಧೂರಿ ಮಂಗಳೂರು ದಸರಾ ನಡೆಯಲಿದೆ. ಕುದ್ರೋಳಿ ಕ್ಷೇತ್ರದ ದಸರಾ ಕೇವಲ ಹಬ್ಬವಲ್ಲ, ಅದು ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಸಮಾಜ ಸೇವೆಯ ಸಮಾಗಮ. ಕುದ್ರೋಳಿ ದಸರಾ ಎನ್ನುವುದು ಕೇವಲ ಉತ್ಸವದ ದಾರಿ ಅಲ್ಲ ಅದು ಭಕ್ತರ ನಂಬಿಕೆಯ ದಾರಿ, ಸಮಾಜ ಒಗ್ಗಟ್ಟಿನ ದಾರಿ, ದಾರಿದ್ದ ನಿವಾರಣೆಯ ದಾರಿ, ಸಮಾನತೆಯ ದಾರಿ. ಆರ್ಥಿಕ ಪುನಸ್ಟೇತನಕ್ಕೆ ದಾರಿ,ಇಲ್ಲಿ ಜಾತಿ, ಧರ್ಮ, ವರ್ಗ ಭೇದವಿಲ್ಲದೆ ಪ್ರತಿಯೊಬ್ಬ ಭಕ್ತನು ತಾಯಿ ಶಾರದೆಯ ಆಶೀರ್ವಾದ ಪಡೆಯುವ ಸೌಭಾಗ್ಯ ಹೊಂದುತ್ತಾನೆ ಎಂಬುದು ನಂಬಿಕೆ.

ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವರಾದ ಬಿ.ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರಾಡಳಿತ ಸಮಿತಿ, ಅಭಿವೃದ್ಧಿ ಸಮಿತಿ ಜೊತೆಗೂಡಿಕೊಂಡು 1991ರಿಂದ ದಸರಾ ಯಾವಾಗಲೂ ಸಾಮಾಜಿಕ ಬದಲಾವಣೆಯ ದಾರಿ ಆಗಿ ಬೆಳೆದಿದೆ. ಸಮಾಜಮುಖಿ ಕಾರ್ಯಕ್ರಮಗಳು, ಕಲೆಗೆ ನೀಡುತ್ತಿರುವ ಪ್ರೋತ್ಸಾಹ, ಧಾರ್ಮಿಕ ಆಚರಣೆಗಳೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಿರುವುದು ಮಂಗಳೂರು ದಸರಾದ ವೈಶಿಷ್ಟವಾಗಿದ್ದು ಈ ವರ್ಷವು ಮಂಗಳೂರು ದಸರಾ ವಿಶೇಷವಾಗಿ, ವಿಭಿನ್ನವಾಗಿ ಮೂಡಿಬರಲಿದೆ ಎಂದು ಕುದ್ರೋಳಿ ಕ್ಷೇತ್ರದ ಕೋಶಾಧಿಕಾರ ಪದ್ಮರಾಜ್ ರಾಮಯ್ಯ ರವರು ತಿಳಿಸಿದ್ದಾರೆ.

ಗಣಪತಿ, ಆದಿಶಕ್ತಿ ಸಹಿತವಾಗಿ ಶಾರದ ಮಾತೆ, ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ಎಲ್ಲಾ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು, ಗಣಹೋಮ, ಚಂಡಿಕಾ ಯಾಗ ಹೋಮಹವನ ಗಳು ನಡೆಯಲಿದ್ದು ಸಕಲ ಸಿದ್ದತೆಗಳನ್ನ ನಡೆಸಲಾಗಿದ್ದು ಮಂಗಳೂರಿನ ದಸರಾ ಎಂದರೆ ಕೇವಲ ಧಾರ್ಮಿಕ ಹಬ್ಬವಲ್ಲ, ಅದು ಕಲೆಯ ಮಹಾಮೇಳ, ಸಂಸ್ಕೃತಿಯ ಜಾತ್ರೆ ಎಂದರು.

ತಾಯಿ ಶಾರದೆಯ ಆರಾಧನೆಯ ಜೊತೆಗೆ ಕಲಾ ಆರಾಧನೆಗೆ ಪ್ರಾಮುಖ್ಯತೆ ನೀಡುತ್ತಾ ಬಂದಿರುವ ಕ್ಷೇತ್ರ ಕುದ್ರೋಳಿ, ಈ ಬಾರಿ ದಸರಾವನ್ನು ಇನ್ನಷ್ಟು ವೈಭವಶಾಲಿಯಾಗಿಸಿದೆ.

ಸಾಂಸ್ಕೃತಿಕ ಕಾರ್ಯಕ್ರಮ

ಈ ಬಾರಿ ಪ್ರತಿದಿನ ಮೂರು ತಂಡಗಳಿಗೆ ಕಲಾಪ್ರದರ್ಶನದ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಗುಣಮಟ್ಟವನ್ನು ಖಾಯ್ದುಕೊಳ್ಳುವ ನಿಟ್ಟಿನಲ್ಲಿ ಬಂದಿರುವ ಮನವಿ ಪತ್ರಗಳನ್ನು ಪರಿಶೀಲಿಸಿ ಅವರ ಪ್ರದರ್ಶನದ ವೀಡಿಯೋಗಳನ್ನು ಪರಿಶೀಲಿಸಿ ಆಯ್ಕೆಮಾಡಲಾಗಿದೆ ಹಾಗೂ ಕಳೆದ 3ವರ್ಷಗಳ ಅವಧಿಯೊಳಗಡೆ ಕಲಾಪ್ರದರ್ಶನ ನೀಡಿದವರನ್ನು ಹೊರತುಪಡಿಸಿ ಹೊಸ ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ 31 ತಂಡಗಳು, 700-800 ಕಲಾವಿದರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದು ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಕಲಾವಿದರ ತಂಡಗಳು ಆಗಮಿಸುತ್ತಿದ್ದಾರೆ.

ವಿಭಿನ್ನ ಕಲಾ ಪ್ರದರ್ಶನ ಈ ಬಾರಿ ಕಲೆ ಮತ್ತು ಸಂಸ್ಕೃತಿಯ ಎಲ್ಲ ರೂಪಗಳು ಒಂದೇ ವೇದಿಕೆಯಲ್ಲಿ ಮೂಡಿಬರಲಿದ್ದುಭರತನಾಟ್ಯ, ವೀಣಾ ವಾದನ,ಜಾನಪದ ಕಲಾಪ್ರಕಾರಗಳು, ಹರಿಕಥೆ, ತಾಳಮದ್ದಳೆ,ಯಕ್ಷಗಾನ, ಯಕ್ಷಗಾನ ನಾಟ್ಯ ಪುಂಡು ವೇಶ ವೈಭವ, ನೃತ್ಯ ರೂಪಕ, ಜಾದು ಪ್ರದರ್ಶನ,ಆಳ್ವಾಸ್ ಸಾಂಸ್ಕೃತಿಕ ವೈಭವ, ಎಸ್.ಡಿ.ಎಮ್ ಕಲಾ ವೈಭವ ನಡೆಯಲಿದೆ.

ಅಸಾಮಾನ್ಯ ಸ್ತ್ರೀ ಸನ್ಮಾನ: ನಾರಿಯೇ ಶಕ್ತಿಯಾಗಿರುವಾಗ ದಸರಾದ ಈ ಅಪೂರ್ವ ಘಳಿಗೆಯಲ್ಲಿ ಸಾಧನೆ, ಸೇವೆಯ ಮುಖೇನ ಬದುಕಿಗೆ ಆಶಾಕಿರಣವಾಗಿ ನಿಲ್ಲುವ, ಇನ್ನು ಎಲೆಮರೆಯ ಕಾಯಿಯಾಗಿ,ಮುಖ್ಯ ಭೂಮಿಕೆಗೆ ಬರದೆ ಸೇವೆಯೆ ಪರಮ ಗುರಿಯೆಂದು ಕರ್ತವ್ಯ ನಿರ್ವಹಿಸುತ್ತಿರೋ ಸಾಧಕರನ್ನ ಈ ಸಂಧರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಿದ್ದೆವೆ.ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳನ್ನೂ ಕೂಡ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದರು.

ಸ್ಪರ್ಧೆಗಳು

ಮಂಗಳೂರು ದಸರಾ ಸದಾ ಪ್ರತಿಭೆಯನ್ನು ಬೆಳೆಸುವ, ಉತ್ತೇಜಿಸುವ ನಿಲುವನ್ನು ಕಾಯ್ದುಕೊಂಡಿದೆ. ಈ ಬಾರಿ ಅನೇಕ ಸ್ಪರ್ಧೆಗಳು ಕಲಾವಿದರಿಗೂ, ಮಕ್ಕಳಿಗೂ, ಸಾಹಿತ್ಯ ಪ್ರೇಮಿಗಳಿಗೆಣಟಿಜಜಜುಟಿಜಜ ಅವಕಾಶ ನೀಡುತ್ತಿವೆ.

ದಸರಾ ರುದ್ರವೀಣಾ ಭಕ್ತಿಪ್ರಧಾನ ನೃತ್ಯ ಸ್ಪರ್ಧೆ ಯನ್ನ ಏರ್ಪಡಿಸಿದ್ದು,ವಿಜೇತರಿಗೆ ಒಟ್ಟು 1 ಲಕ್ಷದ ಭವ್ಯ ಬಹುಮಾನ ಸಿಗಲಿದೆ.ಸಾಹಿತ್ಯ ಪ್ರೇಮಿಗಳಿಗಾಗಿ ಮಂಗಳೂರು ದಸರಾ ಬಹುಭಾಷಾ ಕವಿಗೋಷ್ಠಿ,ಮತ್ತು ತುಳು ಮತ್ತು ಕನ್ನಡ ಕವನ ಸ್ಪರ್ಧೆ,ವಿಶೇಷ ಆಕರ್ಷಣೆ ಯಾಗಿ ಮಕ್ಕಳ ದಸರಾ- ಮಕ್ಕಳಿಗಾಗಿಯೇ ವಿಶೇಷವಾಗಿ ಒಂದು ದಿನದ ಕಾರ್ಯಕ್ರಮ ಸ್ಪರ್ಧೆಗಳ ಆಯೋಜನೆಯಾಗಿದ್ದು ದಿನಪೂರ ಮಕ್ಕಳ ಸಂಭ್ರಮ ದಸರಾದಲ್ಲಿ ಮೂಡಿಬರಲಿದೆ.

ಕಿನ್ನಿಪಿಲಿ ಸ್ಪರ್ಧೆ ದಸರಾಕ್ಕೆ ಹುಲಿ ವೇಷವೇ ಭೂಷಣವಾಗಿರುವಾಗ ಪ್ರಪ್ರಥಮ ಬಾರಿಗೆ ವಿಶೇಷವಾಗಿ ಮಕ್ಕಳಿಗೆ ಕಿನ್ನಿಪಿಲಿ ಸ್ಪರ್ಧೆ ಆಯೋಜಿಸಿದ್ದು 4ವರ್ಷ ಒಳಗಿನ ಮತ್ತು 4-8ವರ್ಷದ ಮಕ್ಕಳಿಗೆ ಎರಡು ವಿಭಾಗದಲ್ಲಿ ನಡೆಯಲಿದೆ. ಆಕರ್ಷಕ ನಗದು ಬಹುಮಾನ ನೀಡಲಿದ್ದೆವೆ. ಜೊತೆಗೆ ಇತರ ಪ್ರತಿಭೆಗಳಿಗಾಗಿ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮುದ್ದು ಶಾರದೆ ಸ್ಪರ್ಧೆ ನಡೆಯಲಿದೆ.ಈ ಸ್ಪರ್ಧೆಗಳ ಮೂಲಕ ಬಾಲ ಪ್ರತಿಭೆಗಳು, ಯುವ ಪ್ರತಿಭೆಗಳು ಮತ್ತು ಹಿರಿಯ ಕಲಾವಿದರು ಎಲ್ಲರಿಗೂ ವೇದಿಕೆ ಸಿಗಲಿದೆ. ಪ್ರತಿದಿನ 3 ತಂಡಗಳ ಕಲಾ ಪ್ರದರ್ಶನ ನಡೆಯಲಿದೆ. ಹಬ್ಬದ ಪ್ರತೀ ದಿನ ಹೊಸ ವೈಭವವಾಗಲಿದೆ.ರಾಜ್ಯ ಮತ್ತು ಹೊರರಾಜ್ಯಗಳಿಂದ ಕಲಾವಿದರ ಆಗಮಿಸಲಿದ್ದಾರೆ.

ಜಾನಪದ, ಯಕ್ಷಗಾನ, ಸಂಗೀತ, ಸಾಹಿತ್ಯ, ನೃತ್ಯ ಎಲ್ಲಾ ಕಲಾ ಪ್ರಕಾರಗಳ ಸಂಕಲನ ಮಕ್ಕಳಿಗೂ ಯುವಕರಿಗೂ ಹೊಸತಾದ ಆಕರ್ಷಕ ಸ್ಪರ್ಧೆಗಳು ಇದ್ದು ಈ ಬಾರಿ ಮಂಗಳೂರು ದಸರಾ ಪರಂಪರೆ ಮತ್ತು ನವೀನತೆಯ ಸೊಗಸಾದ ಸಂಗಮವಾಗಲಿದೆ.

ದಸರಾ ಹಬ್ಬದ ಪ್ರಯುಕ್ತ ಪ್ರತಿವರ್ಷದಂತೆ ನಡೆಯುವ 21 ಕಿ.ಮೀ ಮ್ಯಾರಥಾನ್ ಕೂಡಾ ನಡೆಯಲಿದೆ.ದೇವಸ್ಥಾನದ ಆಸುಪಾಸಿನಲ್ಲಿ ಪಾರ್ಕಿಂಗ್ ಸಮಸ್ಯೆ ಇದ್ದ ಕಾರಣ ವಾಹನ ದಟ್ಟಣೆ ಉಂಟಾಗುವುದರಿಂದ ಉರ್ವ ಮೈದಾನ ಹಾಗೂ ಚರ್ಚ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಜಯಂತ್ ಎಚ್. ಸೋಮಸುಂದರ್,ಮಾಧವ ಸುವರ್ಣ, ದೇವೇಂದ್ರ ಪೂಜಾರಿ ಹಾಗೂ ಕತೀನ್ ಧೀರಾಜ್ ಅಮೀನ್ ರವರು ಉಪಸ್ಥಿತರಿದ್ದರು.


Spread the love
Subscribe
Notify of

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

The opinions, views, and thoughts expressed by the readers and those providing comments are theirs alone and do not reflect the opinions of www.mangalorean.com or any employee thereof. www.mangalorean.com is not responsible for the accuracy of any of the information supplied by the readers. Responsibility for the content of comments belongs to the commenter alone.  

We request the readers to refrain from posting defamatory, inflammatory comments and not indulge in personal attacks. However, it is obligatory on the part of www.mangalorean.com to provide the IP address and other details of senders of such comments to the concerned authorities upon their request.

Hence we request all our readers to help us to delete comments that do not follow these guidelines by informing us at  info@mangalorean.com. Lets work together to keep the comments clean and worthful, thereby make a difference in the community.

0 Comments
Inline Feedbacks
View all comments
wpDiscuz
0
0
Would love your thoughts, please comment.x
()
x
Exit mobile version