ಸೊರಕೆಯವರ ಪ್ರಾಮಾಣಿಕ , ಜಾತ್ಯಾತೀತ ರಾಜಕಾರಣಕ್ಕೆ ಮನಸೋತ ಯುವಕನಿಂದ ಪೆನ್ಸಿಲ್ ಆರ್ಟ್ ಗಿಫ್ಟ್

Spread the love

ಸೊರಕೆಯವರ ಪ್ರಾಮಾಣಿಕ , ಜಾತ್ಯಾತೀತ ರಾಜಕಾರಣಕ್ಕೆ ಮನಸೋತ ಯುವಕನಿಂದ ಪೆನ್ಸಿಲ್ ಆರ್ಟ್ ಗಿಫ್ಟ್

ಉಡುಪಿ: ವಿನಯ ಕುಮಾರ್ ಸೊರಕೆ ಯವರ ವ್ಯಕ್ತಿತ್ವಕ್ಕೆ ಮನಸೋತ ಸಿದ್ಧಾಪುರದ ಯುವಕನೊಬ್ಬ ಚುನಾವಣಾ ಪ್ರಚಾರಕ್ಕೆ ಸೊರಕೆಯವರನ್ನು ಹುಡುಕಿಕೊಂಡು ಬಂದು ಪೆನ್ಸಿಲ್ ಮೂಲಕ ಬಿಡಿಸಿದ ಸೊರಕೆಯವರ ಪೋಟೋವನ್ನು ಗಿಫ್ಟ್ ನೀಡಿದ ಘಟನೆ ಪೆರ್ಡೂರಿನಲ್ಲಿ ನಡೆದಿದೆ.

ಪೆರ್ಡೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಘಟನೆ ನಡೆದಿದ್ದು ವಿನಯ ಕುಮಾರ್ ಸೊರಕೆಯವರ ಪ್ರಾಮಾಣಿಕ, ಜಾತ್ಯಾತೀತ ರಾಜಕಾರಣಕ್ಕೆ ಮನಸೋತಿದ್ದೇನೆ. ತುಂಬಾ ದಿನದಿಂದ ಅವರಿಗೊಂದು ಗಿಫ್ಟ್ ಕೊಡಬೇಕೆಂಬ ಆಸೆ ಮನಸ್ಸಲ್ಲಿತ್ತು. ಇವತ್ತು ಆಸೆ ಕೈಗೂಡಿದೆ ಅಂತಾ ಕಿರಣ್ ಜನ್ಸಾಲೆ ಅಭಿಪ್ರಾಯ ಪಟ್ಟರು


Spread the love