Home Mangalorean News Kannada News ಹಸಿದವರ ಹಸಿವು ನೀಗಿಸುವವರಿಗೆ ದೇವರ ಕೃಪೆ ಸದಾ ಇದೆ – ಫಾ|ವಲೇರಿಯನ್ ಮೆಂಡೊನ್ಸಾ

ಹಸಿದವರ ಹಸಿವು ನೀಗಿಸುವವರಿಗೆ ದೇವರ ಕೃಪೆ ಸದಾ ಇದೆ – ಫಾ|ವಲೇರಿಯನ್ ಮೆಂಡೊನ್ಸಾ

Spread the love

ಹಸಿದವರ ಹಸಿವು ನೀಗಿಸುವವರಿಗೆ ದೇವರ ಕೃಪೆ ಸದಾ ಇದೆ – ಫಾ|ವಲೇರಿಯನ್ ಮೆಂಡೊನ್ಸಾ

ಉಡುಪಿ: ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ, ಉಡುಪಿ ಇದರ ವತಿಯಿಂದ ಶಾಸಕರಾದ ರಘುಪತಿ ಭಟ್ ರವರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ನೇತೃತ್ವದಲ್ಲಿ ಆಯೋಜಿಸಿದ್ದ 6ನೇ ದಿನದ ರಾತ್ರಿ ಊಟ ವಿತರಣಾ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಉಡುಪಿ ಮದರ್ ಆಫ್ ಸಾರೋಸ್ ಚರ್ಚಿನ ಧರ್ಮ ಗುರುಗಳಾದ ಫಾ| ವಲೇರಿಯನ್ ಮಂಡೋನ್ಸ ಹಾಗೂ ದಾನಿಗಳಾದ ಶ್ರೀ ರಾಮ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ನಾಗರಾಜ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್,ಉದ್ಯಮಿಗಳಾದ ಕಿಶೋರ್ ಕುಮಾರ್ ಗುರ್ಮೆ ಮತ್ತು ಸಂತೋಷ್ ಶೆಟ್ಟಿಯವರು ದೀಪ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಉಡುಪಿ ಮದರ್ ಆಫ್ ಸಾರೋಸ್ ಚರ್ಚಿನ ಧರ್ಮ ಗುರುಗಳಾದ ಫಾ| ವಲೇರಿಯನ್ ಮಂಡೋನ್ಸಾ ಹಸಿದವರ ಹಸಿವನ್ನು ನೀಗಿಸುವುದು ಬಹಳ ದೊಡ್ಡ ಕೆಲಸ, ಪ್ರಾರ್ಥನೆ ಮಾಡುವ ಕೈಗಳಿಗಿಂತ ಸೇವೆ ಮಾಡುವ ಕೈಗಳು ಅತೀ ಹೆಚ್ಚು ಪವಿತ್ರ ಎನ್ನುವ ಮಾತಿದೆ. ತನಗಾಗಿ ಅರಳುವುದು ಹೂವಲ್ಲ, ತನಗಾಗಿ ಉರಿಯುವುದು ದೀಪವಲ್ಲ ತನಗಾಗಿ ಜೀವಿಸುವುದು ಜೀವನವಲ್ಲ. ಅದರಂತೆ ಪರರಿಗಾಗಿ ನಮ್ಮ ಜೀವನವನ್ನು ಅರ್ಪಿಸಿದಾಗ ಅದಕ್ಕೆ ವಿಶೇಷ ಅರ್ಥ ಬರುತ್ತದೆ. ಅದರಂತೆ ಪ್ರತಿದಿನ ಸುಮಾರು 5000 ಹಸಿದ ವ್ಯಕ್ತಿಗಳಿಗೆ ಉಣ ಬಡಿಸುವ ಈ ಸೇವೆಗೆ ದೇವರ ಆಶೀರ್ವಾದ ಸದಾ ಇರಲಿ. ಈ ಮೂಲಕ ಪರಸ್ಪರ ಸಹಕಾರದ ಮನೋಭಾವ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಸೋಮವಾರ ಉಡುಪಿ ನಗರದ ವಿವಿಧ ಭಾಗಗಳಲ್ಲಿ ಇಂದು ಸುಮಾರು 5300 ಮಂದಿಗೆ ರಾತ್ರಿ ಊಟವನ್ನು ವಿತರಿಸಲಾಯಿತು.


Spread the love

Exit mobile version