Home Mangalorean News Kannada News ಅಕ್ರಮ ಮರಳು ಅಡ್ಡೆಗೆ ಪೊಲೀಸರಿಂದ ದಾಳಿ : ವಾಹನ ಮತ್ತು ದೋಣಿ ವಶಕ್ಕೆ

ಅಕ್ರಮ ಮರಳು ಅಡ್ಡೆಗೆ ಪೊಲೀಸರಿಂದ ದಾಳಿ : ವಾಹನ ಮತ್ತು ದೋಣಿ ವಶಕ್ಕೆ

Spread the love

ಅಕ್ರಮ ಮರಳು ಅಡ್ಡೆಗೆ ಪೊಲೀಸರಿಂದ ದಾಳಿ : ವಾಹನ ಮತ್ತು ದೋಣಿ ವಶಕ್ಕೆ

ಕುಂದಾಪುರ: ಕುಂದಾಪುರ ತಾಲೂಕು ವ್ಯಾಪ್ತಿಯ ಬೇಳೂರು ಹಿರೆಹೊಳೆಯಲ್ಲಿ ನಡೆಯುತ್ತಿದ್ದಅಕ್ರಮ ಮರಳು ಅಡ್ಡೆಗೆ ಕೋಟ ಪೊಲೀಸರು ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕುಂದಾಪುರ ತಾಲೂಕು ವ್ಯಾಪ್ತಿಯ ಬೇಳೂರು ಹಿರೆಹೊಳೆಯಲ್ಲಿ ಅವ್ಯಾಹತವಾಗಿ ಮರಳುಗಾರಿಕೆ ನಡೆಯುತ್ತಿದೆ ಎಂಬ ಕುರಿತು ಸ್ಥಳೀರಯ ದೂರಿನ ಮೇರೆಗೆ ಮಾಧ್ಯಮದವರೊಂದಿಗೆ ತೆರಳಿದ ಪೊಲೀಸರು ಅಕ್ರಮ ಮರಳು ಅಡ್ಡೆಯ ಮೇಳೆ ದಾಳಿ ನಡೆಸಿದ್ದಾರೆ.

ಈ ವೇಳೆ ಸ್ಥಳದಲ್ಲಿದ್ದ ಮರಳು ಅಡ್ಡೆಯನ್ನು ನಡೆಸುತ್ತಿದ್ದ ವ್ಯಕ್ತಿ ಪೊಲೀಸರ ಸಮ್ಮುಖದಲ್ಲೇ ಮಾಧ್ಯಮದವರೊಂದಿಗೆ ವಾದಕ್ಕಿಳಿದು ಬೆದರಿಕೆ ಕೂಡ ಒಡ್ಡಿದ್ದಾನೆ ಎನ್ನಲಾಗಿದೆ.

ಮರಳುಗಾರಿಕೆ ಗೆ ಸಂಬಂಧಿಸಿದ 407, ಮಾರುತಿ 800 ಮತ್ತು ಒಂದು ದೋಣಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೋಟ ಪೊಲೀಸರು ಅಕ್ರಮ ಮರಳುಗಾರಿಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

Exit mobile version