Home Mangalorean News Kannada News ಅ. 15: ಕಥೊಲಿಕ್ ಸಭಾ ಸಿಟಿ ವಲಯದ ಬೆಳ್ಳಿ ಹಬ್ಬ

ಅ. 15: ಕಥೊಲಿಕ್ ಸಭಾ ಸಿಟಿ ವಲಯದ ಬೆಳ್ಳಿ ಹಬ್ಬ

Spread the love

ಅ. 15: ಕಥೊಲಿಕ್ ಸಭಾ ಸಿಟಿ ವಲಯದ ಬೆಳ್ಳಿ ಹಬ್ಬ

ಮಂಗಳೂರು: ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಸಿಟಿ ವಲಯದ ಬೆಳ್ಳಿ ಹಬ್ಬದ ಸಮಾರಂಭ ಆದಿತ್ಯವಾರ ದಿನಾಂಕ 15.10.2023 ರಂದು ಸಂಜೆ 4:30 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ ದಿವ್ಯ ಬಲಿ ಪೂಜೆ ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದಲ್ಲಿ ನಡೆಯಲಿದೆ. 6:00 ಗಂಟೆಗೆ ಸಭಾ ಕಾರ್ಯಕ್ರಮವು ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದ ಸಭಾಭವನದಲ್ಲಿ ನಡೆಯಲಿದೆ .

ಕಾರ್ಯಕ್ರಮದ ಅಧ್ಯಕ್ಷರಾಗಿ ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ವಿಲ್ಫ್ರೆಡ್ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಪ್ರದೇಶದಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಆಲ್ವಿನ್ ಡಿಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಆಂಜೆಲೋರ್ ಚರ್ಚ್ನ ಪ್ರಧಾನ ಧರ್ಮಗುರು ವಂ| ಫಾದರ್ ವಿಲಿಯಂ ಮಿನೇಜಸ್, ಕೇಂದ್ರೀಯ ಸಮಿತಿಯ ಹಾಗೂ ಸಿಟಿ ವಲಯದ ಕಾರ್ಯದರ್ಶಿಯಾದ ವಿಲ್ಮಾ ಮೊಂತೇರೊ, ಅತಿಥಿಗಳಾಗಿ ಸಿಟಿ ವಲಯದ ಸ್ಥಾಪಕ ಅಧ್ಯಕ್ಷರಾದ ಮಾರ್ಟಿನ್ ಡಿಸೋಜಾ, ವಾಮಂಜೂರ್ ಚರ್ಚ್ನ ಉಪಾಧ್ಯಕ್ಷರಾದ ಚಾರ್ಲ್ಸ್ ಪಾಯ್ಸ್, ಕಥೊಲಿಕ್ ಸಭಾ, ವಾಮಂಜೂರ್ ಘಟಕದ ಅಧ್ಯಕ್ಷರಾದ ಪ್ಯಾಟ್ರಿಕ್ ಲೋಬೊ, ಬೆಳ್ಳಿ ಹಬ್ಬದ ಸಂಚಾಲಕರಾದ ಪ್ರಶಾಂತ್ ಸಲ್ಡಾನ್ಹಾ ಭಾಗವಹಿಸುವರು.

ವೇದಿಕೆ ಕಾರ್ಯದ ನಂತರ ಎಲ್ಲಾ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಬೆಳ್ಳಿ ಹಬ್ಬದ ಊಟದ ವ್ಯವಸ್ಥೆ ಇದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.


Spread the love

Exit mobile version