Home Mangalorean News Kannada News ಇತ್ತಂಡಗಳ ನಡುವೆ ನಡೆದ ಹೊಡೆದಾಟ – ಓರ್ವನ ಬಂಧನ

ಇತ್ತಂಡಗಳ ನಡುವೆ ನಡೆದ ಹೊಡೆದಾಟ – ಓರ್ವನ ಬಂಧನ

Spread the love

ಇತ್ತಂಡಗಳ ನಡುವೆ ನಡೆದ ಹೊಡೆದಾಟ – ಓರ್ವನ ಬಂಧನ

ಮಂಗಳೂರು: ಇತ್ತಂಡಗಳ ನಡುವೆ ನಡೆದ ಹೊಡೆದಾಟಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ಒರ್ವನನ್ನು ಬಂಧೀಸಿದ್ದಾರೆ.

ಬಂಟ್ವಾಳ ಕೈಕಂಬದಲ್ಲಿ 02 ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು. ದೂರುದಾರರಾದ ಬಂಟ್ವಾಳ ನಿವಾಸಿಯಾದ ಅಬ್ದುಲ್ ಫೈಜಲ್ (30) ಎಂಬವರ ದೂರಿನಂತೆ ದಿನಾಂಕ ಜೂನ್ 7 ರಂದು ಬಂಟ್ವಾಳ ಕೈಕಂಬದಲ್ಲಿ ಹಬೀಬ್ ರೆಹಮಾನ್ ಎಂಬಾತ ಕಬ್ಬಿಣದ ಸರಳಿನಿಂದ ಪಿರ್ಯಾದಿದಾರರ ತಲೆಯ ಬಲಭಾಗಕ್ಕೆ ಹೊಡೆದಿದ್ದು, ನಿಶಾನ್ ಎಂಬಾತನು ಬಲ ಕೈಯಿಂದ ಹಲ್ಲೆ ನಡೆಸಲಾಗಿತ್ತು. ಫೈಜಲ್ ಕಾರಿನಲ್ಲಿದ್ದ ಇರ್ಫಾನ್ ಎಂಬಾತನು ಆರೋಪಿಗಳಿಂದ ಫೈಜಲ್ ಅವರಿಗೆ ಹೆಚ್ಚಿನ ಹಲ್ಲೆಯಾಗದಂತೆ ತಡೆದು, ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ತಂದು ದಾಖಲಿಸಿದ್ದರು.

ಘಟನೆಯ ಬಗ್ಗೆ ಫೈಜಲ್ ದೂರಿನಂತೆ ರೆಹಮಾನ್, ನಜ್ಜಿ ಹಾಗೂ ನಿಶಾನ್ ಎಂಬವರ ವಿರುದ್ದ ಠಾಣೆಯಲ್ಲಿ ಕಲಂ: 324, 307, 323 ಜೊತೆಗೆ 34 ಭಾ.ದಂ.ಸಂ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪ್ರತಿದೂರನ್ನು ಬಂಟ್ವಾಳ ನಿವಾಸಿಯಾದ ಹಬೀಬ್ ರೆಹಮಾನ್ (33) ಎಂಬವರು ನೀಡಿದ್ದು, ಈ ದೂರಿನಂತೆ ಜೂನ್ 8 ರಂದು ರಾತ್ರಿ ಸಮಯ 9.30 ಗಂಟೆಗೆ ಕೈಕಂಬದಲ್ಲಿ ತನ್ನ ಸಂಬಂಧಿ ಶಾಹಿನ್ ಮತ್ತು ಸ್ನೇಹಿತ ಸಲ್ಸಾರ್ ಎಂಬವರರೊದಿಗೆ ನಿಂತಿದ್ದಾಗ ಒಂದು ಬಿಳಿ ಬಣ್ಣದ ಕಾರಿನಲ್ಲಿ ಪೈಜಲ್ ಬಂದು ಅವ್ಯಾಚ ಶಬ್ಧಗಳಿಂದ ನಿಂದಿಸಿ ಕೈಯಲ್ಲಿದ್ದ ತಲವಾರಿನಿಂದ ಹಬೀಬ್ ರೇಹಮಾನ್ ಅವರಿಗೆ ಹಲ್ಲೆ ನಡೆಸಿದ್ದು ಪಿರ್ಯಾದಿದಾರರು ತಪ್ಪಿಸಿಕೊಂಡು ಓಡಿ ಹೋಗಿರುತ್ತಾರೆ. ಅಗ ಸದ್ರಿ ಕಾರಿನಲ್ಲಿದ್ದ ಇರ್ಫಾನ್ ಎಂಬಾತನು ಒಟ್ಟಿಗೆ ಇದ್ದು, ಇರ್ವರೂ ಸೇರಿ ಪಿರ್ಯಾದಿಗೆ ಮತ್ತು ಪಿರ್ಯಾದಿಯ ಒಟ್ಟಿಗೆ ಇದ್ದ ಪಿರ್ಯಾದಿಯ ಅಕ್ಕನ ಮಗನಿಗೆ ಹಲ್ಲೆ ನಡೆಸಿದ್ದು, ಸದ್ರಿ ಬಿಳಿ ಕಾರಿನಲ್ಲಿ ಇನ್ನು ಇಬ್ಬರು ಆರೋಪಿತರು ಇರುತ್ತಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಫೈಜಲ್ ಇರ್ಫಾನ್ (ತೊಂದೆ) ಮತ್ತು ಇರ್ಫಾನ್ ಇತರ ಒಬ್ಬನ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಅರೋಪಿಗಳು ಉಪಯೋಗಿಸಿದ ವಾಹನವನ್ನು ಮತ್ತು ಆಯುಧವನ್ನು ವಶಕ್ಕೆ ಪಡೆಯಲಾಗಿರುತ್ತದೆ.


Spread the love

Exit mobile version