Home Mangalorean News Kannada News ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಎಬಿವಿಪಿಯಿಂದ ವಿಜಯೋತ್ಸವ

ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಎಬಿವಿಪಿಯಿಂದ ವಿಜಯೋತ್ಸವ

Spread the love

ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಗೆ ಎಬಿವಿಪಿಯಿಂದ ವಿಜಯೋತ್ಸವ

ಮಂಗಳೂರು: ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಪುಲ್ವಾಮ ಭಯೋತ್ಪಾದನಾ ದಾಳಿಗೆ ಉತ್ತರವಾಗಿ, ಪ್ರತಿ ದಾಳಿಯನ್ನು ನಡೆಸಿದ ಭಾರತೀಯ ವಾಯು ಸೈನ್ಯದ ಕೆಲಸಕ್ಕೆ ಮೆಚ್ಚುಗೆಯನ್ನು ಸಲ್ಲಿಸಲಾಯಿತು.

ಈ ಹಿಂದೆ ನಡೆಸಿದ ಭಯೋತ್ಪಾದನಾ ದಾಳಿಗೆ ಉತ್ತರವಾಗಿ ಉಗ್ರರ ಕ್ಯಾಂಪಸ್ ಮೇಲೆ ದಾಳಿ ನಡೆಸುವ ಮೂಲಕ ಪುಲ್ಪಾಮಾ ದಾಳಿಯಲ್ಲಿ ಮಡಿದ ಯೋಧರ ಆತ್ಮಕ್ಕೆ ಶಾಂತಿ ದೊರೆತಂತಾಯಿತು ಮತ್ತು ಅವರ ಬಲಿದಾನ ವ್ಯರ್ಥವಾಗಿಲ್ಲ ಎಂಬ ಸಂದೇಶವನ್ನು ಜಗತ್ತಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕಾಲೇಜಿನ ವಿದ್ಯಾರ್ಥಿಗಳಾದ ಸಂಪತ್, ವರ್ಷಿತ್, ಸಂಕೇತ್, ಜೀವನ್‍ರಾಜ್ ಮುಂತಾದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಿಹಿಯನ್ನು ಹಂಚಲಾಯಿತು.


Spread the love

Exit mobile version