Home Mangalorean News Kannada News ಉಡುಪಿ: ಕೊರೋನಾ ಭೀತಿಯಿಂದ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಉಡುಪಿ: ಕೊರೋನಾ ಭೀತಿಯಿಂದ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

Spread the love

ಉಡುಪಿ: ಕೊರೋನಾ ಭೀತಿಯಿಂದ ಡೆತ್ ನೋಟ್ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಉಡುಪಿ: ತನಗೆ ಕೊರೋನಾ ಇದೆ ಎಂದು ಡೆತ್ ನೋಟ್ ಬರೆದಿಟ್ಟು ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಉಪ್ಪೂರು ನರ್ನಾಡು ನಿವಾಸಿ ಗೋಪಾಲಕೃಷ್ಣ ಮಡಿವಾಳ (56) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಮೃತ ಗೋಪಾಲಕೃಷ್ಣ ಮಡಿವಾಳ ಕೆ ಎಸ್ ಆರ್ ಟಿ ಸಿ ಬಸ್ ಟ್ರೈನರ್ ಆಗಿದ್ದು ಇಂದು ಬೆಳಿಗ್ಗೆ ತನಗೆ ಕೊರೋನಾ ಇದೆ ಎಂದು ಡೆತ್ ನೋಟ್ ಬರೆದಿಟ್ಟು  ತನ್ನ ಮನೆಯ ಹಿಂಬಾಗದಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತ ಗೋಪಾಲಕೃಷ್ಣ ರಿಗೆ ಜ್ವರ, ಶೀತದ ಯಾವುದೇ ಲಕ್ಷಣ ಇರಲಿಲ್ಲ ಆದರೆ ಮಾನಸಿಕ ಖಿನ್ನತೆಯನ್ನು ಹೊಂದಿದ್ದರು ಎಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ.

ಮೃತ ವ್ಯಕ್ತಿಗೆ ಕೊರೊನಾ ಇದೆಯೋ ಇಲ್ಲವೋ ಎನ್ನುವುದು ಜಿಲ್ಲಾಡಳಿತ ಇನ್ನಷ್ಟೇ ಧೃಡಪಡಿಸಬೇಕಾಗಿದೆ.


Spread the love

Exit mobile version