ಉಡುಪಿ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಅಧ್ಯಕ್ಷರಾಗಿ ಚಾರ್ಲ್ಸ್ ಅಂಬ್ಲರ್ ಆಯ್ಕೆ
ಉಡುಪಿ: ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆಗೆ ನೂತನ ಅಧ್ಯಕ್ಷರಾಗಿ ಚಾರ್ಲ್ಸ್ ಅಂಬರ್ ಅವರು ಆಯ್ಕೆಯಾಗಿದ್ದಾರೆ.
ಮಂಗಳವಾರ ನಗರದ ಹೊಟೇಲ್ ಮಣಿಪಾಲ್ ಇನ್, ಆಡಿಟೋರಿಯಂನಲ್ಲಿ ನಡೆದ ಮಹಾಸಭೆಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ಮಾಜಿ ಅಧ್ಯಕ್ಷರಾದ ಡಾ. ಜೆರಾಲ್ಡ್ ಪಿಂಟೊ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು
ಇತರ ಪದಾಧಿಕಾರಿಗಳ ವಿವರ
ಉಪಾಧ್ಯಕ್ಷರು : ಶಾಂತಿ ಪಿರೇರಾ
ಕಾರ್ಯದರ್ಶಿ : ಟಿ ಎಮ್ ಜಫ್ರುಲ್ಲಾ
ಸಹಕಾರ್ಯದರ್ಶಿ : ರೋಶನಿ ಒಲಿವೇರಾ
ಖಜಾಂಚಿ : ಎಮ್ ಎಸ್ ಖಾನ್
ನಿಕಟಪೂರ್ವ ಅಧ್ಯಕ್ಷರು : ಇಸ್ಮಾಯಿಲ್ ಹುಸೇನ್ ಕಟಪಾಡಿ
ಸಲಹೆಗಾರರು : ವಂ|ಚಾರ್ಲ್ಸ್ ಮಿನೇಜಸ್, ಆಲ್ಫೋನ್ಸ್ ಡಿಕೊಸ್ತಾ, ಬೈಕಾಡಿ ಹುಸೇನ್, ವಲೇರಿಯನ್ ಫೆರ್ನಾಂಡಿಸ್, ಸಲಾವುದ್ದೀನ್, ಮೇರಿ ಡಿಸೋಜಾ ಉದ್ಯಾವರ.
ಸಂಪರ್ಕ ಪತ್ರಿಕೆ ಸಂಪಾದಕರು : ಡಾ. ಜೆರಾಲ್ಡ್ ಪಿಂಟೊ