Home Mangalorean News Kannada News ಉಡುಪಿ : ತ್ಯಾಜ್ಯ ಸುರಿಯುತ್ತಿದ್ದ ವಾಹನದಿಂದ ದಂಡ ವಸೂಲಿ

ಉಡುಪಿ : ತ್ಯಾಜ್ಯ ಸುರಿಯುತ್ತಿದ್ದ ವಾಹನದಿಂದ ದಂಡ ವಸೂಲಿ

Spread the love

ಉಡುಪಿ : ತ್ಯಾಜ್ಯ ಸುರಿಯುತ್ತಿದ್ದ ವಾಹನದಿಂದ ದಂಡ ವಸೂಲಿ

ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯ ಕರಾವಳಿ ಬೈಪಾಸ್ ಬಳಿ ಮಾರ್ಬಲ್ ಸಾಗಿಸುವ ವಾಹನದಲ್ಲಿದ್ದ ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ಕಛೇರಿಯ ಆರೋಗ್ಯ ನಿರೀಕ್ಷಕರು ದಾಳಿ ನಡೆಸಿ ಸದರಿ ಪ್ರದೇಶದಲ್ಲಿದ್ದ ತ್ಯಾಜ್ಯವನ್ನು ಮರಳಿ ವಾಹನಕ್ಕೆ ತುಂಬಿಸಿ, 2300 ರೂ. ದಂಡ ವಸೂಲಿ ಮಾಡಲಾಯಿತು.

ನಗರಸಭಾ ವ್ಯಾಪ್ತಿಯಲ್ಲಿ ವಿವಿಧ ಕಡೆ ಕಸ ಬಿಸಾಡುತ್ತಿರುವವರಿಂದ ಸುಮಾರು 50000 ರೂ. ನಷ್ಟು ದಂಡ ಸಂಗ್ರಹಿಸಿದ್ದು, ಇನ್ನು ಮುಂದೆ ಯಾವುದೇ ಪ್ರದೇಶದಲ್ಲಿ ತ್ಯಾಜ್ಯವನ್ನು ಸುರಿಯುವುದು ಕಂಡು ಬಂದಲ್ಲಿ, ಘನತ್ಯಾಜ್ಯ ವಸ್ತು ನಿರ್ವಹಣೆ 2016 ರೀತ್ಯಾ ಮೊಕದ್ದಮೆಯನ್ನು ದಾಖಲಿಸಿ ಹೆಚ್ಚುವರಿ ದಂಡವನ್ನು ವಿಧಿಸಲಾಗುವುದು ಎಂದು ಉಡುಪಿ ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version