Home Mangalorean News Kannada News ಉಡುಪಿ: ಪರಿವರ್ತನಾ ಸಮಾವೇಶ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಬೈಕ್ ರ್ಯಾಲಿ

ಉಡುಪಿ: ಪರಿವರ್ತನಾ ಸಮಾವೇಶ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಬೈಕ್ ರ್ಯಾಲಿ

Spread the love

ಉಡುಪಿ: ಪರಿವರ್ತನಾ ಸಮಾವೇಶ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ಬೈಕ್ ರ್ಯಾಲಿ

ಉಡುಪಿ: ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮ ಜನರಿಗೆ ತಿಳಿಸಲು ಮತ್ತು ಲೋಕಸಭೆ ಚುನಾವಣೆಯ ಸಿದ್ದತೆ ಮತ್ತು ಪ್ರಚಾರ ಜನಸ್ಪಂದನ ರೂಪುರೇಷೆಗಳ ಬಗ್ಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಕಾಂಗ್ರೆಸ್ ಪರಿವರ್ತನಾ ಯಾತ್ರೆ ಮತ್ತು ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿಯಾಗಿ ಮಾರ್ಚ್ 10 ರ ಭಾನುವಾರ 1.30 ಗಂಟೆಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿದೆ.

ಬೈಕ್ ರ್ಯಾಲಿಯು ಅಂಬಲಪಾಡಿ ಶ್ಯಾಮಿಲಿ ಮೈದಾನದಲ್ಲಿ ಚಾಲನೆ ಪಡೆದು, ಅಂಬಲಪಾಡಿ ಜಂಕ್ಷನ್ ಮೂಲಕ ಸಾಗಿ, ಬ್ರಹ್ಮಗಿರಿ ಸರ್ಕಲ್, ಅಜ್ಜರಕಾಡು ಸರಕಾರಿ ಆಸ್ಪತ್ರೆ, ಬಿಗ್ ಬಜಾರ್, ಡಯಾನಾ ಸರ್ಕಲ್, ಕೆಎಮ್ ಮಾರ್ಗ, ತ್ರಿವೇಣಿ ಸರ್ಕಲ್, ಸರ್ವಿಸ್ ಬಸ್ ನಿಲ್ದಾಣ, ಕಿದಿಯೂರು, ಸಿಟಿ ಬಸ್ ನಿಲ್ದಾಣದ ಮೂಲಕ ಕಲ್ಸಂಕ ರಾಯಲ್ ಗಾರ್ಡನ್ ಬಳಿ ಸಮಾಪನಗೊಳ್ಳಲಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version