Home Mangalorean News Kannada News ಉಡುಪಿ: ಲಯನ್ಸ್ ಕ್ಲಬ್ ಇಂದ್ರಾಳಿ ಬೆಳ್ಳಿಹಬ್ಬ ; ಮೇ 1- 6 `ಘರ್ಜನೆ-2015′ ಸಾಂಸ್ಕೃತಿಕ ಕಾರ್ಯಕ್ರಮ

ಉಡುಪಿ: ಲಯನ್ಸ್ ಕ್ಲಬ್ ಇಂದ್ರಾಳಿ ಬೆಳ್ಳಿಹಬ್ಬ ; ಮೇ 1- 6 `ಘರ್ಜನೆ-2015′ ಸಾಂಸ್ಕೃತಿಕ ಕಾರ್ಯಕ್ರಮ

Spread the love

ಉಡುಪಿ: ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿಯ ಬೆಳ್ಳಿಹಬ್ಬದ ಆಚರಣೆಯ ಪೂರ್ವಭಾವಿಯಾಗಿ `ಘರ್ಜನೆ-2015′ ಸಾಂಸ್ಕೃತಿಕ ಸೇವಾ ವೈಭವ ಕಾರ್ಯಕ್ರಮ ಮೇ1ರಿಂದ 6ರ ವರೆಗೆ ಪ್ರತಿದಿನ ಸಾಯಂಕಾಲ 6ರಿಂದ ಅಜ್ಜರಕಾಡಿನ ಭುಜಂಗ ಪಾರ್ಕಿನಲ್ಲಿ ನಡೆಯಲಿದೆ ಎಂದು `ಘರ್ಜನೆ 2015ರ ಮಹಾ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.
ಮೇ 1ರಂದು ಘರ್ಜನೆ 2015 ಉದ್ಘಾಟನೆಗೊಳ್ಳಲಿದೆ. ಅಂದಿನಿಂದ ಪ್ರತಿದಿನ ಹಿರಿತನ, ವೃತ್ತಿಪರತೆ, ಪ್ರಾಮಾಣಿಕತೆ ಮತ್ತು ಕಾರ್ಯಕ್ಷಮತೆಯ ಆಧಾರದಲ್ಲಿ ನಗರಸಭೆ `ಡಿ’ ಶ್ರೇಣಿಯ ನೌಕರರು, ಅಂಚೆ ಇಲಾಖೆಯ ಪೋಸ್ಟ್ಮ್ಯಾನ್, ಮೆಸ್ಕಾಂನ ಲೈನ್ ಮ್ಯಾನ್, ಬಸ್ ಚಾಲಕರು, ವಿಕಲಚೇತನ ಅಧ್ಯಾಪಕಿಯರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಅಲ್ಲದೆ ಸಮಾರೋಪ ಸಮಾರಂಭದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಸಮಾಜಸೇವೆ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ 9 ಮಂದಿ ಸಾಧಕರಿಗೆ `ಲಯನ್ಸ್ ನವರತ್ನ-2015′ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಉಡುಪಿ ಮಣಿಪಾಲ ನಡುವಿನ ಲಕ್ಷ್ಮೀಂದ್ರ ನಗರದಲ್ಲಿ ಬಸ್ ತಂಗುದಾಣ ಉದ್ಘಾಟನೆಯೂ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಅಂಗವಾಗಿ ಮೇ 1ರಂದು 10-15 ವಯೋಮಿತಿಯ ಮಕ್ಕಳ ಪ್ರತಿಭಾನ್ವೇಷಣೆ ಸ್ಪರ್ಧೆ ನಡೆಯಲಿದೆ. ಮೇ 2ರಂದು ತಾಯಂದಿರಿಗಾಗಿ `ಸುಪರ್ ಮೋಮ್’ ಸ್ಪರ್ಧೆ, ಮೇ 3ರಂದು `ಆದರ್ಶ ದಂಪತಿ’ ಸ್ಪರ್ಧೆ , ಮೇ 4,5 ಮತ್ತು 6ರಂದು 20-20 ಕುಸಾಲ್ ಹಾಸ್ಯ ಸ್ಪರ್ದೆ ನಡೆಯಲಿದೆ ಎಂದು ಅವರು ತಿಳಿಸಿದರು.
ಲಯನ್ಸ್ ಕ್ಲಬ್ ಉಡುಪಿ-ಇಂದ್ರಾಳಿಯ ಅಧ್ಯಕ್ಷ ರತ್ನಾಕರ ಇಂದ್ರಾಳಿ, ವಲಯ ಸಭಾಪತಿ ಮೋಹನ್ ಎಂ.ಪಿ., ಘರ್ಜನೆ ಸಹ ನಿರ್ದೇಶಕ ಮೌಹಮ್ಮದ್ ಮೌಲಾ, ಲಯನ್ಸ್ ಕ್ಲಬ್ ಕಾರ್ಯದಶರ್ಿ ಸುದೇಶ್ ಶೆಟ್ಟಿ, ಲಯನೆಸ್ ಕ್ಲಬ್ ಉಡುಪಿ ಇಂದ್ರಾಳಿಯ ಅಧ್ಯಕ್ಷೆ ಸವಿತಾ ಜೆ. ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version