Home Mangalorean News Kannada News ಉಡುಪಿ: ಲಾಡ್ಜಿನಲ್ಲಿ ಅಪರಿಚಿತ ಯುವಕನ ಆತಹತ್ಯೆ

ಉಡುಪಿ: ಲಾಡ್ಜಿನಲ್ಲಿ ಅಪರಿಚಿತ ಯುವಕನ ಆತಹತ್ಯೆ

Spread the love

ಉಡುಪಿ: ಲಾಡ್ಜಿನಲ್ಲಿ ಅಪರಿಚಿತ ಯುವಕನ ಆತಹತ್ಯೆ

ಉಡುಪಿ: ನಗರದ ಸರಕಾರಿ ಬಸ್ಸು ನಿಲ್ದಾಣದ ಸನಿಹದ ಶಾಂಭವಿ ಲಾಡ್ಜಿನಲ್ಲಿ ವಾಸ್ತವ್ಯ ಹೂಡಲು ಬಂದಿರುವ ಅಪರಿಚಿತ ಯುವಕನೊರ್ವನು, ಫ್ಯಾನಿಗೆ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಮಂಗಳವಾರ ನಡೆದಿದೆ.

ಮೃತ ಯುವಕನಿಗೆ ಸುಮಾರು 22 ವರ್ಷ ಪ್ರಾಯ ಅಂದಾಜಿಸಲಾಗಿದೆ. ವೀರಭದ್ರ, ಬೆಂಗಳೂರು ಕೆಂಗೇರಿಯ ಪರಿಸರದ ನಿವಾಸಿ ಆಗಿರಬಹುದೆಂದು ಶಂಕಿಸಲಾಗಿದೆ. ಯುವಕ ಮರಣಪತ್ರ ಬರೆದಿಟ್ಟಿದ್ದು ಅದರಲ್ಲಿ ನನ್ನವರು ಅಂತ ನನಗೆ ಯಾರು ಇಲ್ಲ. ಅದಕ್ಕಾಗಿ ಜೀವನದಲ್ಲಿ ಬೇಸರವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣವೆಂದು ಉಲ್ಲೇಖಿಸಿದ್ದಾನೆ.

ಯುವಕ ಆತ್ಮಹತ್ಯೆ ಕೃತ್ಯ ಎಸೆಗುವ ಮುನ್ನ ತನ್ನಲ್ಲಿರುವ ಮೊಬೈಲ್, ಇನ್ನಿತರ ದಾಖಲೆಗಳನ್ನು ಸುಟ್ಟು ನಾಶಗೊಳಿಸಿ ಕಸದ ಬುಟ್ಟಿಗೆ ಹಾಕಿರುವುದು ಕಂಡು ಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version