Home Mangalorean News Kannada News ಉಳ್ಳಾಲ ದರ್ಗಾಕ್ಕೆ ರಾಹುಲ್ ಭೇಟಿ, ಚಾದರ ಅರ್ಪಣೆ

ಉಳ್ಳಾಲ ದರ್ಗಾಕ್ಕೆ ರಾಹುಲ್ ಭೇಟಿ, ಚಾದರ ಅರ್ಪಣೆ

Spread the love

ಉಳ್ಳಾಲ ದರ್ಗಾಕ್ಕೆ ರಾಹುಲ್ ಭೇಟಿ, ಚಾದರ ಅರ್ಪಣೆ

ಮಂಗಳೂರು: ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂದಿ , ಮಂಗಳೂರು ಭೇಟಿ ಯ ಸಂದರ್ಭದಲ್ಲಿ, ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಚಾದರ ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು.

ಉಳ್ಳಾಲ ದರ್ಗಾ ಅಧ್ಯಕ್ಷ ಜನಾಬ್ ಅಲ್ ಹಾಜ್ ಅಬ್ದುಲ್‌ರಶೀದ್ , ಶಾಲು ಹೊದಿಸಿ ರಾಹುಲ್‌ ಗಾಂದಿಯನ್ನು ಸ್ವಾಗತಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ , ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್, ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯಿಲಿ, ರಾಜ್ಯ ಆಹಾರ ಮಂತ್ರಿ ಯು.ಟಿ.ಖಾದರ್, ಸುರತ್ಕಲ್ ಶಾಸಕ ಮೊಯ್ದಿನ್ ಬಾವ, ಕಾಂಗ್ರೆಸ್ ಪ್ರಮುಖ ಸೆಲೀಂ ಅಹ್ಮದ್ , ದರ್ಗಾ ಉಪಾಧ್ಯಕ್ಷ ಮೋನು ಇಸ್ಮಾಯಿಲ್, ಬಾವ ಮಹಮ್ಮದ್, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತ್ವಾಹ ಹಾಜಿ, ಜತೆ ಕಾರ್ಯದರ್ಶಿ ಅಝಾದ್ ಇಸ್ಮಾಯಿಲ್, ಚಾರಿಟೇಬಲ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲಾ, ಇಬ್ರಾಹಿಂ, ಕೋಶಾಧಿಕಾರಿ ಜೆ. ಹಮೀದ್, ಕಾರ್ಯದರ್ಶಿ ಹಾಜಿ ಎ.ಕೆ. ಮೊಹಿಯುದ್ಧೀನ್, ಅರಬಿಕ್ ಟ್ರಸ್ಟ್ ಉಪಾಧ್ಯಕ್ಷ ಹಾಜಿ ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಹಾಜಿ ಅಮೀರ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಬಾಸ್ ದರ್ಗಾ ಸದಸ್ಯ ಯು.ಕೆ. ಮಹಮ್ಮದ್ ಮುಸ್ತಫಾ, ಅದ್ದಾ, ಅಬೂಬಕ್ಕರ್, ಅಲಿಮೋನು, ಎನ್.ಕೆ.ಮಹಮ್ಮದ್, ಫಾರುಕ್ ಉಳ್ಳಾಲ್,ಮತ್ತು ದರ್ಗಾ ಸಮಿತಿಯ ಪದಾಧಿಕಾರಿಗಳು, ಮಂಗಳೂರು ಇಂಡಿಯಾನ ಆಸ್ಪತ್ರೆಯ ಚೇರ್ಮ್ಯಾನ್ ಅಬ್ದುಲ್ಲಾ ಇಬ್ರಾಹಿಂ(ಆರ್ಯಪ್ಪಾಡಿ), ಔಟ್ ಡೋರ್ ಸೊಲ್ಯೂಷನ್ಸ್ ನ ಹಾಶಿರ್, ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

ರಾಹುಲ್ ಗಾಂದಿ ಯ ಭೇಟಿಗಾಗಿ ಉಳ್ಳಾಲವನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ರಸ್ತೆಯ ಉದ್ದಕ್ಕೂ ಸ್ವಾಗತ ಫಲಕ ಗಳಿಂದ ಗಮನ ಸೆಳೆಯಲಾಗಿತ್ತು.


Spread the love

Exit mobile version