Home Mangalorean News Kannada News ಕರ್ತವ್ಯ ನಿರತ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ – ಇಬ್ಬರ ಬಂಧನ

ಕರ್ತವ್ಯ ನಿರತ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ – ಇಬ್ಬರ ಬಂಧನ

Spread the love

ಕರ್ತವ್ಯ ನಿರತ ಪೊಲೀಸ್ ಕಾನ್ಸ್ ಟೇಬಲ್ ಮೇಲೆ ಹಲ್ಲೆ – ಇಬ್ಬರ ಬಂಧನ

ಮಂಗಳೂರು; ಕರ್ತವ್ಯ ನಿರತ ಕದ್ರಿ ಠಾಣೆಯ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಾಲಕ ಕೃಷ್ಣಾಪುರ 7ನೇ ಬ್ಲಾಕ್ನ ನಿವಾಸಿ ಇರ್ಫಾನ್ (31) ಹಾಗೂ ಪುತ್ತೂರು ಸಂಪ್ಯ ನಿವಾಸಿ ಅಬ್ದುಲ್ ಅಜೀಜ್ (52) ಎಂದು ಗುರುತಿಸಲಾಗಿದೆ.

ಕದ್ರಿ ಸಂಚಾರಿ ಠಾಣೆಯ ಯತೀಶ್ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನಂತೂರು ವೃತ್ತದ ಬಳಿ ಸಂಚಾರ ದಟ್ಟನೆಗೆ ಕಾರಣವಾಗಿದ್ದ ಕಾರು ಚಾಲಕನನ್ನು ನಿಲ್ಲಿಸುವಂತೆ ಕರ್ತವ್ಯ ನಿರತ ಯತೀಶ್ ಸೂಚನೆ ನೀಡಿದಾಗ ಆತ ನಿರ್ಲಕ್ಷಿಸಿ ಮುಂದುವರಿದಿದ್ದಾನೆ. ಆಗ ಕಾನ್ಸ್ಟೇಬಲ್ ಅವರು ಕಾರಿನ ಫೋಟೊ ತೆಗೆದಿದ್ದಾರೆ. ಇದರಿಂದ ಸಿಟ್ಟುಗೊಂಡ ಇರ್ಫಾನ್ ಹಾಗೂ ಅಬ್ದುಲ್ ಅಜೀಜ್ ಕಾರನ್ನು ತಿರುಗಿಸಿ ಯತೀಶ್ ನಿಂತಲ್ಲಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲಾಗಿತ್ತು. ಇದೀಗ ಇಬ್ಬರು ಆರೋಪಿಗಳನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.


Spread the love

Exit mobile version