Home Mangalorean News Kannada News ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜೆಡಿಎಸ್ ದಕ ಜಿಲ್ಲಾ ಘಟಕ ಉದ್ಘಾಟನೆ

ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜೆಡಿಎಸ್ ದಕ ಜಿಲ್ಲಾ ಘಟಕ ಉದ್ಘಾಟನೆ

Spread the love

ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜೆಡಿಎಸ್ ದಕ ಜಿಲ್ಲಾ ಘಟಕ ಉದ್ಘಾಟನೆ

ಮಂಗಳೂರು: ಕರ್ನಾಟಕ ಪ್ರದೇಶ ವಿದ್ಯಾರ್ಥಿ ಜನತಾದಳ ದಕ್ಷಿಣ ಕನ್ನಡ ಜಿಲ್ಲಾ ನೂತನ ಘಟಕ ಉದ್ಘಾಟನಾ ಸಮಾರಂಭವು ಮಂಗಳೂರು ನಗರದ ಮಿನಿ ವಿಧಾನಸೌಧ ಬಳಿಯ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ ಉದ್ಘಾಟಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಜನತಾದಳದ ರಾಜ್ಯಾಧ್ಯಕ್ಷರಾದ ಆರ್ ಚಂದ್ರಶೇಖರ್ ಅವರು ಜಿಲ್ಲಾ ನೂತನ ಘಟಕದ ಅಧ್ಯಕ್ಷರಾಗಿ ಸಿನಾನ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ತೇಜಸ್ ನಾಯಕ್ ಅವರಿಗೆ ನೇಮಕಾತಿ ಪತ್ರ ವಿತರಿಸಿದರು.

ಬಳಿಕ ಮಾತನಾಡಿದ  ಆರ್ ಚಂದ್ರಶೇಖರ್ ಅವರು ವಿದ್ಯಾರ್ಥಿ ನಿಟ್ಟಿನಲ್ಲಿ ನಾಯಕತ್ವವನ್ನು ಬೆಳೆಸಿಕೊಂಡು ಮುಂದಿನ ಬಾರಿ ಕುಮಾರಣ್ಣನಿಗೆ ಶಕ್ತಿ ತುಂಬಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಕುಂಞ ಮಾತನಾಡಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕೋಮುಗಲಭೆಯಿಂದ ವಿದ್ಯಾರ್ಥಿಗಳು ದೂರ ಉಳಿದು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕುಎಂದರು.

ಈ ಕಾರ್ಯಕ್ರಮದ ನೇತೃತ್ವ ವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಜಿಲ್ಲಾಧ್ಯಕ್ಷರು ಅಕ್ಷಿತ್ ಸುವರ್ಣ ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿ ವಹಿಸಿ ಮಾರ್ಗದರ್ಶನ ನೀಡಿದರು.

 ಸಮಾರಭದಲ್ಲಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಖಾದರ್ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ವಸಂತ ಪೂಜಾರಿ ರಾಜ್ಯ ನಾಯಕರಾದ ಹೈದರ್ ಪರ್ತಪಾಡಿ, ಜೆ ಮಹಮ್ಮದ್, ಗೋಪಾಲಕೃಷ್ಣ ಅತ್ತಾವರ, ಫೈಸಲ್, ಇಕ್ಬಾಲ್ ಮುಲ್ಕಿ, ಗುರುದಾಸ್,  ಶ್ರೀಧರ್ ಗೌಡ ಬಿದರೆ, ಶ್ರೀನಾಥ್ ರೈ,  ಜಿಲ್ಲಾ ನಾಯಕರುಗಳಾದ ನಾಸೀರ್,  ಕನಕದಾಸ್ ಜಿಲ್ಲಾ ಯುವ ನಾಯಕರುಗಳಾದ ಮಧುಸೂದನ್ ಗೌಡ,  ಲಿಖಿತ್ ರಾಜ್, ಅರ್ಷಕ್ ಇಸ್ಮಾಯಿಲ್, ದೀಪಕ್, ಕಿಶೋರ್ ಶೆಟ್ಟಿ, ರತೀಶ್ ಕರ್ಕೇರ ಜಿಲ್ಲಾ ವಿದ್ಯಾರ್ಥಿ ನಾಯಕರುಗಳಾದ ರಿತೇಶ್ ರೈ, ಪ್ರಜ್ವಲ್, ಲೋಯ್ಡ್ ಮುಲ್ಕಿ, ಕೌಶಿಕ್ ಪೂಜಾರಿ, ಸಂರಜ್ ರಾಝಕ್ ರಾಜ್ಯ, ಜಿಲ್ಲಾ, ವಿದ್ಯಾರ್ಥಿ ಮುಖಂಡರು ಭಾಗವಹಿಸಿದ್ದರು


Spread the love

Exit mobile version