Home Mangalorean News Kannada News ಕಾಪುವಿಗೆ ತಾಲೂಕು ಮಾನ್ಯತೆ; ಸಿದ್ದರಾಮಯ್ಯಗೆ ಕಾಂಗ್ರೆಸ್ ವತಿಯಿಂದ ಅಭಿನಂದನೆ

ಕಾಪುವಿಗೆ ತಾಲೂಕು ಮಾನ್ಯತೆ; ಸಿದ್ದರಾಮಯ್ಯಗೆ ಕಾಂಗ್ರೆಸ್ ವತಿಯಿಂದ ಅಭಿನಂದನೆ

Spread the love

ಕಾಪುವಿಗೆ ತಾಲೂಕು ಮಾನ್ಯತೆ; ಸಿದ್ದರಾಮಯ್ಯಗೆ ಕಾಂಗ್ರೆಸ್ ವತಿಯಿಂದ ಅಭಿನಂದನೆ

ಉಡುಪಿ: ಕಾಪುವನ್ನು ತಾಲೂಕಾಗಿ ಪರಿವರ್ತನೆ ಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕಾಪು ಕಾಂಗ್ರೆಸ್‍ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

 ಉಡುಪಿಯ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಬ ಕಾಪು ರಾಜೀವ ಭವನದ ಎದುರು ಕೆಲ ಕಾಲ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಪು ಶಾಸಕ ವಿನಯಕುಮಾರ್ ಸೊರಕೆ, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್‍ಚಂದ್ರ ಜೆ ಶೆಟ್ಟಿ ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.

 ಈ ಸಂದರ್ಭ ಸೊರಕೆ ಹಾರ ಹಾಕಿ, ಪೇಟ ತೊಡಿಸಿ ಅಬಿವಂಧನೆ ವ್ಯಕ್ತಪಡಿಸಿದರು.

ಈ ಸಂದರ್ಭ ಸೊರಕೆ ಮಾತನಾಡಿ, ಕಳೆದ ಬಾರಿ ಉಡುಪಿಗೆ ಆಗಮಿಸಿದಾಗ, ಕಾಪುವನ್ನು ತಾಲೂಕಾಗಿ ಪರಿವರ್ತನೆ ಮಾಡಬೇಕೆಂದು ಮನವಿ ಸಲಿಸಿದ್ದೆವು. ಅವರು ನೀಡಿದ ಭರವಸೆಯಂತೆ ತಾಲೂಕಾಗಿ ಘೋಷಣೆ ಮಾಡಿದ್ದಾರೆ. ಈಬಾರಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ. ಅಂತೆಯೇ ಈ ಬಾರಿ ತಾಲೂಕನ್ನು ಶೀಘ್ರವಾಗಿ ಅನುಷ್ಠಾನಕ್ಕೆ ತರುವಂತೆ ಮನವಿ ಮಾಡಲಾಯಿತು ಎಂದರು.

 ಈ ಸಂದರ್ಭ ಸಚಿವ ಯುಟಿ ಖಾದರ್, ದೇವಿಪ್ರಸಾದ್ ಶೆಟ್ಟಿ, ಗೀತಾ ವಾಗ್ಲೆ, ಸರಸು ಬಂಗೇರಾ, ದೀಪಕ್ ಎರ್ಮಳು, ಹರೀಶ್ ನಾಯಕ್, ವಿಶ್ವಾಸ್ ಅಮೀನ್ ಮತ್ತಿತರರು ಉಪಸ್ತಿತರಿದ್ದರು.


Spread the love

Exit mobile version