Home Mangalorean News Kannada News ಕಾರು – ಬೈಕುಗಳ ನಡುವೆ ಸರಣಿ ಅಪಘಾತ – ಒರ್ವ ಸಾವು, ಮೂವರಿಗೆ ಗಂಭೀರ ಗಾಯ

ಕಾರು – ಬೈಕುಗಳ ನಡುವೆ ಸರಣಿ ಅಪಘಾತ – ಒರ್ವ ಸಾವು, ಮೂವರಿಗೆ ಗಂಭೀರ ಗಾಯ

Spread the love

ಕಾರು – ಬೈಕುಗಳ ನಡುವೆ ಸರಣಿ ಅಪಘಾತ – ಒರ್ವ ಸಾವು, ಮೂವರಿಗೆ ಗಂಭೀರ ಗಾಯ

ಕುಂದಾಪುರ : ಅತಿ ವೇಗದ ಕಾರು ಚಾಲನೆಯಿಂದ ಸರಣಿ ಅಪಘಾತ ನಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು ಮೂವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗಂಗೊಳ್ಳಿ ಸಮೀಪದ ನಾಯಕವಾಡಿಯ ರಾಮ ಮಂದಿರದ ಎದುರು ಘಟನೆ ನಡೆದಿದೆ.

ಮೃತರನ್ನು ಬೈಕ್ ಸವಾರರಾದ ಮೊಹಮ್ಮದ್ ತಾರೀಕ್ (23) ಎಂದು ಗುರುತಿಸಲಾಗಿದೆ.

ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ ಬರುತ್ತಿದ್ದ ಬೈಕುಗಳಿಗೆ ಗಂಗೊಳ್ಳಿಯಿಂದ ತ್ರಾಸಿ ಕಡೆ ಹೋಗುತ್ತಿದ್ದ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೊಹಮ್ಮದ್ ತಾರೀಕ್ ಮೃತ ಪಟ್ಟಿದ್ದಾರೆ.

ಇದೇ ವೇಳೆ ಇನ್ನೊಂದು ಬೈಕಿನ ನಾಯಕವಾಡಿಯ ನಿವಾಸಿ ರವಿ ಹಾಗೂ ನರಸಿಂಹ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರು ಚಾಲಕ ಮೌಲಾನಾ ಆಜ್ಗರ್ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರನ್ನೂ ಉಡುಪಿ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿದೆ.

ಗಂಗೊಳ್ಳಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love

Exit mobile version