Home Mangalorean News Kannada News ಕುಂದಾಪುರ ಅಕ್ರಮ ಜಾನುವಾರು ಸಾಗಾಟ – ಒರ್ವ ವಶಕ್ಕೆ

ಕುಂದಾಪುರ ಅಕ್ರಮ ಜಾನುವಾರು ಸಾಗಾಟ – ಒರ್ವ ವಶಕ್ಕೆ

Spread the love

ಕುಂದಾಪುರ ಅಕ್ರಮ ಜಾನುವಾರು ಸಾಗಾಟ – ಒರ್ವ ವಶಕ್ಕೆ

ಕುಂದಾಪುರ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದು ಜಾನುವಾರು ಸಹಿತ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಮೇ 10ರಂದು ಸಂಜೆ 4 ಗಂಟೆಯ ಸುಮಾರಿಗೆ ಕುಂದಾಪುರ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಹರೀಶ್ ಆರ್ ರವರಿಗೆ ಕುಂದಾಪುರ ತಾಲೂಕು ಕೋಡಿ ಗ್ರಾಮದ ಜಟ್ಟಿಗೇಶ್ವರ ದೇವಸ್ಥಾನದ ಬಳಿ ವಾಹನದಲ್ಲಿ ದನ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಗಳೊಂದಿಗೆ ಹೋಗಿ ಪರಿಶೀಲನೆ ನಡೆಸಿದಾಗ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಒಂದು ದನ ಹಾಗೂ ಸಣ್ಣ ಕರುವನ್ನು ವಾಹನದ ಹಿಂಬದಿಯಲ್ಲಿ ಹಗ್ಗದಿಂದ ಬಿಗಿದು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಿಸಿ ವಾಹನ ಚಾಲಕ ಪಿಯೂಸ್ ಡಿಮೆಲ್ಲೊ (37) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ವಶಪಡಿಸಿಕೊಂಡ ಜಾನುವಾರುಗಳ ಮೌಲ್ಯ ರೂಪಾಯಿ 8000/- ಹಾಗೂ ವಾಹನದ ಅಂದಾಜು ರೂಪಾಯಿ 1,00,000/- ಆಗಿರುತ್ತದೆ.

ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version