Home Mangalorean News Kannada News ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು

ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು

Spread the love

ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ ಬಾಲಕ ಸಾವು

ಕುಂದಾಪುರ : ನವರಾತ್ರಿ ಉತ್ಸವಕ್ಕೆಂದು ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಾಗಿ 16 ವರ್ಷದ ಬಾಲಕನೋರ್ವ ಮೃತಪಟ್ಟ ಘಟನೆ ಕುಂದಾಪುರ ಬಳಿಯ ಉಪ್ಪಿನ ಕುದ್ರು ಎಂಬಲ್ಲಿ ನಡೆದಿದೆ.

ಮೃತ ಬಾಲಕನನ್ನು ಕುಂದಾಪುರ ತಾಲೂಕು ಉಪ್ಪಿನ ಕುದ್ರು ನಿವಾಸಿ ಗಂಗಾಧರ ಆಚಾರ್ ಅವರ ಪುತ್ರ ಧನುಷ್ (16) ಎಂದು ಗುರುತಿಸಲಾಗಿದೆ.

ಮೃತ ಧನುಷ್ ತನ್ನ ಮನೆ ಸಮೀಪದ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆಂದು ರಾತ್ರಿ 08:00 ಸುಮಾರು ಗಂಟೆಗೆ ಮನೆಯಿಂದ ಹೋಗಿದ್ದು, ರಾತ್ರಿ 9.30 ಗಂಟೆಗೆ ದೇವಸ್ಥಾನದಲ್ಲಿ ಕಾರ್ಯಕ್ರಮದ ಬಗ್ಗೆ ವಿದ್ಯುದ್ದೀಪದ ಅಲಂಕಾರ ಮಾಡಿದ ದೇವಸ್ಥಾನದ ದಕ್ಷಿಣ ದಿಕ್ಕಿನ ಕಂಪೌಂಡ್ ಗೋಡೆಗೆ ಅಳವಡಿಸಿದ ವಿದ್ಯುದ್ದೀಪದ ಕೇಬಲ್ ಆಕಸ್ಮಿಕವಾಗಿ ತಾಗಿ ಅಸ್ವಸ್ಥಗೊಂಡಿದ್ದು ಕೂಡಲೇ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ಆತ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version