Home Mangalorean News Kannada News ಕುಂಪಲ : ಹುಲಿವೇಷಧಾರಿಯ ಮೃತದೇಹ ಬಾವಿಯಲ್ಲಿ ಪತ್ತೆ

ಕುಂಪಲ : ಹುಲಿವೇಷಧಾರಿಯ ಮೃತದೇಹ ಬಾವಿಯಲ್ಲಿ ಪತ್ತೆ

Spread the love

ಕುಂಪಲ : ಹುಲಿವೇಷಧಾರಿಯ ಮೃತದೇಹ ಬಾವಿಯಲ್ಲಿ ಪತ್ತೆ

 ಮಂಗಳೂರು: ಹುಲಿವೇಷಧಾರಿಯೊಬ್ಬರ ಮೃತದೇಹ ಕುಂಪಲ ವಿದ್ಯಾನಗರದ ಬಾವಿಯಲ್ಲಿ ಶನಿವಾರ ಸಂಜೆ ಪತ್ತೆಯಾಗಿದೆ.

ಗರೋಡಿ ನಿವಾಸಿ ವಸಂತ್‌ ಕುಮಾರ್ (57) ಮೃತ ವ್ಯಕ್ತಿ.

 ಕುಂಪಲದಲ್ಲಿ ಮೊಸರುಕುಡಿಕೆ ಉತ್ಸವಕ್ಕಾಗಿ ವಸಂತ್ ಹುಲಿವೇಷ ಹಾಕಿದ್ದರು. ಶುಕ್ರವಾರ ರಾತ್ರಿ 2 ಗಂಟೆಗೆ ಟ್ರಕ್‌ನಿಂದ ಇಳಿದ ವಸಂತ್ ಸಮೀಪದಲ್ಲಿದ್ದ ಸಂಬಂಧಿಕರ ಮನೆಯ ಸಮೀಪದ ಬಾವಿಯ ಕಟ್ಟೆ ಬಳಿ ಕುಳಿತುಕೊಂಡಿದ್ದು, ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಶನಿವಾರ ಮಧ್ಯಾಹ್ನದವರೆಗೆ ಅವರಿಗಾಗಿ ಹುಡುಕಾಟ ನಡೆಸಿದ್ದರು. ಕುಂಪಲದ ಬಾವಿಯಲ್ಲಿ ಟೋಪಿ ತೇಲುತ್ತಿತ್ತು. ಬಳಿಕ ವಿಷಯ ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version