Home Mangalorean News Kannada News ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ವ್ಯಾಟಿಕನ್‌ನ ಭಾರತ–ನೇಪಾಳ ಡೆಪ್ಯುಟಿ ರಾಯಭಾರಿ ಭೇಟಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ವ್ಯಾಟಿಕನ್‌ನ ಭಾರತ–ನೇಪಾಳ ಡೆಪ್ಯುಟಿ ರಾಯಭಾರಿ ಭೇಟಿ

Spread the love

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ವ್ಯಾಟಿಕನ್‌ನ ಭಾರತ–ನೇಪಾಳ ಡೆಪ್ಯುಟಿ ರಾಯಭಾರಿ ಭೇಟಿ

ಮಂಗಳೂರು : ವ್ಯಾಟಿಕನ್‌ನ ಭಾರತ ಮತ್ತು ನೇಪಾಳದ ಡೆಪ್ಯುಟಿ ರಾಯಭಾರಿ ಫಾದರ್ ಆಂಡ್ರಿಯಾ ಫಾನ್ರಿಯಾ ಅವರು ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಐತಿಹಾಸಿಕ ಹಿನ್ನೆಲೆ ಮತ್ತು ಧಾರ್ಮಿಕ ಮಹತ್ವದ ಕುರಿತು ಮಾಹಿತಿ ಪಡೆದ ಅವರು ಅಪಾರ ಸಂತೋಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ಫಾ. ಜೋಸೆಫ್, ಬಿಜು ಎಂ. ಜೋಸೆಫ್ (ಮಂಗಳೂರು) ಹಾಗೂ ಮನೋಜ್ ಅವರೂ ಜೊತೆಯಲ್ಲಿದ್ದರು. ಕ್ಷೇತ್ರದ ವತಿಯಿಂದ ಫಾ. ಫಾನ್ರಿಯಾ ಅವರನ್ನು ಗೌರವಿಸಲಾಯಿತು.

ಅವರನ್ನು ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಾಜಿ ಕಾರ್ಪೊರೇಟರ್ ಪ್ರವೀಣ್‌ಚಂದ್ರ ಆಳ್ವ ಮತ್ತು ದಿನೇಶ್ ಅಂಚನ್ ಆತ್ಮೀಯವಾಗಿ ಸ್ವಾಗತಿಸಿದರು.

ಫಾ. ಫಾನ್ರಿಯಾ ಅವರ ಈ ಭೇಟಿಯು ಧಾರ್ಮಿಕ ಸಹಿಷ್ಣುತೆ ಮತ್ತು ಸಂಸ್ಕೃತಿಗಳ ನಡುವೆ ಪರಸ್ಪರ ಅರ್ಥೈಸುವಿಕೆಗೆ ಒಂದು ಸುಂದರ ಸಂದೇಶ ನೀಡಿದಂತಾಗಿದೆ.


Spread the love

Exit mobile version