Home Mangalorean News Kannada News ಕೃಷಿಕರ ಸಂಘ ಚಿತ್ತಾರಿ, ಬಾಳ್ಕದ್ರು ಉದ್ಘಾಟನೆ

ಕೃಷಿಕರ ಸಂಘ ಚಿತ್ತಾರಿ, ಬಾಳ್ಕದ್ರು ಉದ್ಘಾಟನೆ

Spread the love

ಕೃಷಿಕರ ಸಂಘ ಚಿತ್ತಾರಿ, ಬಾಳ್ಕದ್ರು ಉದ್ಘಾಟನೆ

ಉಡುಪಿ: ಕೃಷಿಕರ ಸಂಘ ಚಿತ್ತಾರಿ, ಬಾಳ್ಕದ್ರು ಇದರ ಉದ್ಘಾಟನೆ ಭಾನುವಾರ ಜರುಗಿತು. ರೈತ ಸಂಪರ್ಕ ಕೇಂದ್ರ ಕೋಟ ಇದರ ಮುಖ್ಯಸ್ಥರಾದ ಸುಪ್ರಭಾ ಮತ್ತು ಸಹಾಯಕರಾದ ಚಂದ್ರಶೇಖರ ಉಪಾಧ್ಯಾಯ ಅವರು ರೈತರಿಗೆ ಕೃಷಿ ಚಟುವಟಿಕೆಗೆ ಸಂಬಂಧಿಸಿ ಲಭಿಸುವ ವಿವಿಧ ಯೋಜನೆಗಳ ಮಾಹಿತಿಯ ನ್ನು ನೀಡಿದರು.

ಬಾಳ್ಕುದ್ರು ಹಾಲು ಉತ್ಪಾದಕರ ಸಂಘ ಇದರ ನಿರ್ದೇಶಕರಾದ ಶ್ರೀಪತಿ ಅಧಿಕಾರಿ ಅವರು ಡೈರಿ ಉದ್ಯಮದ ಉಪಯೋಗದ ಮಾಹಿತಿ ನೀಡಿದರೆ ಸಾಸ್ತಾನ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀಧರ ಪಿ ಎಸ್ ಅವರು ಇತ್ತೀಚಿಗೆ ಕೃಷಿಯ ಬಗ್ಗೆ ಇಸ್ರೇಲ್ ಅಧ್ಯಯನ ಪ್ರವಾಸದ ಅನುಭವವನ್ನು ಹಂಚಿಕೊಂಡರು.

ಸಂಘದ ಅಧ್ಯಕ್ಷರಾದ ಉರ್ಬಾನ್ ಡಿಸೋಜಾ, ಕಾರ್ಯದರ್ಶಿ ವಿಲ್ಯಮ್ ಸಲ್ಡಾನಾ, ಕೋಶಾಧಿಕಾರಿ ಅನಿತಾ ಡಿಸೋಜಾ ಉಪಸ್ಥಿತರಿದ್ದರು. ಹಿರಿಯ ಕೃಷಿಕ ವಾಲ್ಟರ್ ಸಲ್ಡಾನಾ ಸ್ವಾಗತಿಸಿ, ದಿನೇಶ್ ಭಟ್ ಅವರು ವಂದಿಸಿದರು.


Spread the love

Exit mobile version