Home Mangalorean News Kannada News ಕೈನೆಟಿಕ್ ಲಾರಿ ಡಿಕ್ಕಿ ಯುವಕ ಸಾವು

ಕೈನೆಟಿಕ್ ಲಾರಿ ಡಿಕ್ಕಿ ಯುವಕ ಸಾವು

Spread the love

ಕೈನೆಟಿಕ್ ಲಾರಿ ಡಿಕ್ಕಿ ಯುವಕ ಸಾವು
ಮಂಗಳೂರು: ಕೈನಟಿಕ್ ಸ್ಕೂಟರಿಗೆ ಲಾರಿಯೊಂದು ಡಿಕ್ಕಿಯಾಗಿ ಕೈನೆಟಿಕ್ ಸವಾರ ಮೃತಪಟ್ಟ ಘಟನೆ ಪುತ್ತೂರಿನ ದರ್ಬೆಯಲ್ಲಿ ಭಾನುವಾರ ನಡೆದಿದೆ.
ಮೃತರನ್ನು ಪುತ್ತೂರು ತಾಲೂಕಿನ ಚಿಕ್ಕಮಡ್ನೂರು ನಿವಾಸಿ ಅಬ್ದುಲ್ ರಜಾಕ್ ಪುತ್ರ ಸಫ್ವಾನ್ (30) ಎಂದು ಗುರುತಿಸಲಾಗಿದೆ.
ಸಫ್ವಾನ್ ಚಲಾಯಿಸುತ್ತಿದ್ದ ಕೈನೆಟಿಕ್ ವಾಹನಕ್ಕೆ ಲಾರಿ ಡಿಕ್ಕಿಯಾದ ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಆತನನ್ನು ಪುತ್ತೂರು ನಗರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಿದ ವೇಳೆ ರಾತ್ರಿ ವೇಳೆ ಮೃತಪಟ್ಟಿದ್ದಾರೆ.
ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Exit mobile version