Home Mangalorean News Kannada News ಕೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಸ್ವಾಗತಾರ್ಹ: ಎಸ್.ಪಿ.ಬರ್ಬೋಜ

ಕೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಸ್ವಾಗತಾರ್ಹ: ಎಸ್.ಪಿ.ಬರ್ಬೋಜ

Spread the love

ಕೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆ ಸ್ವಾಗತಾರ್ಹ: ಎಸ್.ಪಿ.ಬರ್ಬೋಜ

ಉಡುಪಿ: ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿಯವರಾದ ಕುಮಾರಸ್ವಾಮಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಅಶ್ವಾಸನೆ ನೀಡಿದಂತೆ ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಕ್ರೈಸ್ತ ಅಭಿವೃದ್ಧಿ ನಿಗಮ ದ ಸ್ಥಾಪನೆ ಹಾಗೂ ಅದಕ್ಕಾಗಿ 200 ಕೋಟಿ ಅನುದಾನವನ್ನು ಈ ಬಜೆಟ್ ನಲ್ಲಿ ನೀಡಿರುವುದಕ್ಕೆ ಜೆಡಿಎಸ್ ಕೈಸ್ತ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಎಸ್ .ಪಿ.ಬರ್ಬೋಜ ಹರ್ಷ ವ್ಯಕ್ತಪಡಿಸಿದ್ದಾರೆ .

ಕ್ರೈಸ್ತ ಅಭಿವೃದ್ಧಿ ನಿಗಮ ಘೋಷಣೆಯ ಹಿಂದೆ ಮಾಜೀ ಪ್ರಧಾನಿ ಎಚ್.ಡಿ.ದೇವೇಗೌಡ, ರಾಜ್ಯ ಕಾರ್ಯಧ್ಯಕ್ಷರಾದ ಎಂ.ಎಸ್ ನಾರಾಯಣ್ ರಾವ್, ಜೆಡಿಎಸ್ ನ ಕೈಸ್ತ ಅಲ್ಪಸಂಖ್ಯಾತ ಘಟಕದ ರಾಜ್ಯಾಧ್ಯಕ್ಷರಾದ ವಿಲ್ಸನ್ ರೆಡ್ಡಿ ಹಾಗೂ ಕೈಸ್ತ ಅಲ್ಪಸಂಖ್ಯಾತ ಘಟಕದ ಎಲ್ಲಾ ಪದಾಧಿಕಾರಿಗಳ ಶ್ರಮ ಮಹತ್ವದ್ದು ಆಗಿದೆ ಎಂದು ಜೆಡಿಎಸ್ ಕೈಸ್ತ ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಎಸ್ .ಪಿ.ಬರ್ಬೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version