Home Mangalorean News Kannada News ಕೊಕ್ಕಡ: ಕಾರುಗಳ ನಡುವೆ ಅಪಘಾತ; ಐದು ಮಂದಿಗೆ ಗಾಯ

ಕೊಕ್ಕಡ: ಕಾರುಗಳ ನಡುವೆ ಅಪಘಾತ; ಐದು ಮಂದಿಗೆ ಗಾಯ

Spread the love

ಕೊಕ್ಕಡ: ಕಾರುಗಳ ನಡುವೆ ಅಪಘಾತ; ಐದು ಮಂದಿಗೆ ಗಾಯ

ಮಂಗಳೂರು: ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನೆಲ್ಯಾಡಿ ಸಮೀಪದ ಕೊಕ್ಕಡದಲ್ಲಿ ನಡೆದಿದೆ.

ಕಾರಿನಲ್ಲಿದ್ದ ಯಮುನಾ ( 40 ವರ್ಷ), ಧನ್ಯಾ (16 ವರ್ಷ) ಮೋಕ್ಷಿ ( 19 ವರ್ಷ), ಮುತ್ತಪ್ಪ (45 ವರ್ಷ), ಮೋಹಿನಿ (43 ವರ್ಷ) ಎಂದು ಗುರುತಿಸಲಾಗಿದೆ.

ಎರಡು ಮಾರುತಿ ವಾಹನಗಳ ನಡುವೆ ನಡೆದ ಮುಖಾಮುಖಿ ಢಿಕ್ಕಿಯಲ್ಲಿ ಎರಡೂ ವಾಹನದ ಮುಂಭಾಗ ಜಖಂಗೊಂಡಿದೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ ಮಾರುತಿ ಸ್ವಿಫ್ಟ್ ಡಿಸೈರ್ ಹಾಗೂ ಪುತ್ತೂರಿನ ರಿಜಿಸ್ಟ್ರೇಶನ್ ಹೊಂದಿರುವ ಮಾರುತಿ ಸಿಲರಿಯೊ ಅಪಘಾತಗೊಂಡ ಕಾರುಗಳು.

ಅತೀ ವೇಗದಲ್ಲಿ ಚಲಾಯಿಸಿಕೊಂಡು ಬರುತಿದ್ದ ಆಯಂಬುಲೆನ್ಸ್ ಗೆ ಸೈಡ್ ಕೊಡಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಷಿಗಳು ತಿಳಿಸಿದ್ದಾರೆ.

ನಿಯಂತ್ರಣ ಕಳೆದುಕೊಂಡ ಆಯಂಬುಲೆನ್ಸ್ ಕೂಡ ಈ ಎರಡು ಕಾರುಗಳ ಸಮೀಪವೇ ಮಗುಚಿದೆ.


Spread the love

Exit mobile version