Home Mangalorean News Kannada News ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ

ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ

Spread the love

ಕೋರೊನಾ ಸೋಂಕಿಗೆ ದಕ ಜಿಲ್ಲೆಯಲ್ಲಿ ಮೂರನೇ ಬಲಿ

ಮಂಗಳೂರು: ಕೊರೋನಾ ಮಹಾ ಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೋಂದು ಬಲಿ ತೆಗೆದುಕೊಂಡಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ಕಸಬಾದ ಮಹಿಳೆ ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲೂಕಿನ ಕಸಬಾ ಗ್ರಾಮದ ರೋಗಿ ಸಂಖ್ಯೆ ಪಿ -409 ಎಂಬವರು 4 ದಿನಗಳ ಹಿಂದೆ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಿಂದ ತಾಲೂಕು ಆಸ್ಪತ್ರೆ ಬಂಟ್ವಾಳ ಇಲ್ಲಿಗೆ ದಾಖಲಾಗಿದ್ದು, ಏಪ್ರಿಲ್ 18ರಂದು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ದಾಖಲಾಗಿದ್ದರು. ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಏಪ್ರಿಲ್ 20 ರಂದು ವರದಿ ಪಾಸಿಟಿವ್ ಬಂದಿದ್ದು, ಐಸಿಯು ನಲಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ನಿಧನರಾಗಿದ್ದಾರೆ


Spread the love

Exit mobile version