Home Mangalorean News Kannada News ಕ್ಞುಲ್ಲಕ ಕಾರಣಕ್ಕೆ ಹೋಟೆಲ್ ಮಾಲಿಕನಿಂದ ಯುವಕನಿಗೆ ಚೂರಿ ಇರಿತ

ಕ್ಞುಲ್ಲಕ ಕಾರಣಕ್ಕೆ ಹೋಟೆಲ್ ಮಾಲಿಕನಿಂದ ಯುವಕನಿಗೆ ಚೂರಿ ಇರಿತ

Spread the love

ಕ್ಞುಲ್ಲಕ ಕಾರಣಕ್ಕೆ ಹೋಟೆಲ್ ಮಾಲಿಕನಿಂದ ಯುವಕನಿಗೆ ಚೂರಿ ಇರಿತ

ಮಂಗಳೂರು: ಹೋಟೆಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು, ಅದು ವಿಪರೀತಕ್ಕೆ ತಿರುಗಿದ ಪರಿಣಾಮ ಹೋಟೆಲ್ ಮಾಲಿಕರು ಯುವಕನೋರ್ವನಿಗೆ ಚೂರಿಯಿಂದ ತಿವಿದ ಘಟನೆ ಪಾಣೆ ಮಂಗಳೂರಿನಲ್ಲಿ ನಡೆದಿದೆ.

ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಯುವಕನನ್ನು ನೆಹರುನಗರದ ನಿವಾಸಿ ನೌಫಾಲ್ (25) ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಪಾಣೆಮಂಗಳೂರಿನ ಚಿಕನ್ ಆಂಡ್ ಫಿಶಾವಿ ಹೋಟೆಲ್ ಮಾಲಿಕ ಹಾಗೂ ನೆಹರು ನಗರದ ಯುವಕರ ಮಧ್ಯೆ ಕ್ಷುಲ್ಲಕ ವಿಷಯಗಳಿಗೆ ಮಾತಿನ ಚಕಮಕಿ ನಡೆದಿದ್ದು,ಅದು ವಿಪರೀತಕ್ಕೆ ತಿರುಗಿದ ಪರಿಣಾಮ ಹೋಟೆಲಿ ಮಾಲಕ ಯಾಸೀನ್ (30) ಎಂಬವರು ನೌಫಲ್ ಅವರಿಗೆ ಚೂರಿಯಿಂದ ಇರಿದಿದ್ದರು ಎನ್ನಲಾಗಿದೆ. ಇದರಿಂದ ಉದ್ರಿಕ್ತರಾದ ಯುವಕರ ಗುಂಪು ಹೋಟೆಲ್ ಗಾಜುಗಳನ್ನು ಪುಡಿಮಾಡಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಹೋಟೆಲ್ ಮಾಲಿಕನನ್ನು ವಶಕ್ಕೆ ಪಡೆದಿದ್ದು, ಯುವಕರನ್ನು ಸ್ಥಳದಿಂದ ಚದುರಿಸಿದ್ದಾರೆ.

ಗಂಭೀರ ಗಾಯಗೊಂಡ ನೌಫಾಲ್ ಅವರಿಗೆ ತುಂಬೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.


Spread the love

Exit mobile version