Home Mangalorean News Kannada News ಗೋಕರ್ಣದಲ್ಲಿ ಬೈಕ್, ಲಾರಿ ಡಿಕ್ಕಿ: ಉಡುಪಿಯ ವಿದ್ಯಾರ್ಥಿಗಳಿಬ್ಬರು ಮೃತ್ಯು

ಗೋಕರ್ಣದಲ್ಲಿ ಬೈಕ್, ಲಾರಿ ಡಿಕ್ಕಿ: ಉಡುಪಿಯ ವಿದ್ಯಾರ್ಥಿಗಳಿಬ್ಬರು ಮೃತ್ಯು

Spread the love

ಗೋಕರ್ಣದಲ್ಲಿ ಬೈಕ್, ಲಾರಿ ಡಿಕ್ಕಿ: ಉಡುಪಿಯ ವಿದ್ಯಾರ್ಥಿಗಳಿಬ್ಬರು ಮೃತ್ಯು

ಗೋಕರ್ಣ: ಇಲ್ಲಿಯ ಸಮೀಪದ ಹಿರೇಗುತ್ತಿಯ ಮಕರ ಹೊಟೆಲ್ ಬಳಿ ಶನಿವಾರ ತಡರಾತ್ರಿ ಬೈಕ್ ಮತ್ತು ಲಾರಿ ಮುಖಾಮುಖಿಯಾಗಿ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತರನ್ನು ಅಂಬಲಪಾಡಿ ದೇವಳ ಸಮೀಪದ ನಿವಾಸಿ ಸತೀಶ್ ಶೆಟ್ಟಿ ಎಂಬವರ ಮಗ ಸಯನ್ ಶೆಟ್ಟಿ (19) ಹಾಗೂ ಬ್ರಹ್ಮಗಿರಿಯ ನಾಯರ್‌ಕೆರೆ ಬಳಿಯ ನಿವಾಸಿ ರೇಖಾ ಸಾಗರಿಕ ಎಂಬವರ ಮಗ ಆರ್ತಿಕ್ ಸಾಲ್ಯಾನ್ (19) ಎಂದು ಗುರುತಿಸಲಾಗಿದೆ.

ಇವರಿಬ್ಬರು ಮಣಿಪಾಲ ಮಾಹೆಯ ಬಿಬಿಎ (ಬ್ಯಾಚುಲರ್ ಆಫ್ ಬ್ಯುಸಿನೆಸ್ ಆಡ್ಮಿಸ್ಟ್ರೇಶನ್) ವಿದ್ಯಾರ್ಥಿಗಳಾಗಿದ್ದರು. ಇವರಿಬ್ಬರು ಸಹಿತ ಒಟ್ಟು ನಾಲ್ವರು ಗೆಳೆಯರು ಎರಡು ಬೈಕಿನಲ್ಲಿ ಜೂ.8ರಂದು ಗೋಕರ್ಣಕ್ಕೆ ತಿರು ಗಾಡಲು ತೆರಳಿದ್ದರು. ಇವರು ಕುಮಟಾ ಕಡೆಯಿಂದ ಅಂಕೋಲಾ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಲಾರಿ ಹಿಂದಿಕ್ಕುವ ಸಮಯದಲ್ಲಿ ಈ ಅವಘಡ ಸಂಭವಿಸಿದೆ.  ಗಂಭೀರವಾಗಿ ಗಾಯಗೊಂಡ ಸಯನ್ ಹಾಗೂ ಆರ್ತಿಕ್ ಸ್ಥಳದಲ್ಲೇ ಮೃತಪಟ್ಟರು.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಯಿತು.


Spread the love

Exit mobile version