Home Mangalorean News Kannada News ಗೋ ಬ್ಯಾಕ್ ಅಭಿಯಾನಕ್ಕೆ ಹೆದರಲ್ಲ; ಪಕ್ಷಕ್ಕಾಗಿ 25 ವರ್ಷ ಮಣ್ಣು ಹೊತ್ತಿದ್ದೇನೆ; ಶೋಭಾ ಕರಂದ್ಲಾಜೆ

ಗೋ ಬ್ಯಾಕ್ ಅಭಿಯಾನಕ್ಕೆ ಹೆದರಲ್ಲ; ಪಕ್ಷಕ್ಕಾಗಿ 25 ವರ್ಷ ಮಣ್ಣು ಹೊತ್ತಿದ್ದೇನೆ; ಶೋಭಾ ಕರಂದ್ಲಾಜೆ

Spread the love

ಗೋ ಬ್ಯಾಕ್ ಅಭಿಯಾನಕ್ಕೆ ಹೆದರಲ್ಲ; ಪಕ್ಷಕ್ಕಾಗಿ 25 ವರ್ಷ ಮಣ್ಣು ಹೊತ್ತಿದ್ದೇನೆ; ಶೋಭಾ ಕರಂದ್ಲಾಜೆ

ಉಡುಪಿ: ಇಷ್ಟು ವರುಷ ಪುರುಷ ಸಂಸದರು ಮಾಡದ ಅಭಿವೃದ್ಧಿ ಕಾರ್ಯಗಳನ್ನು ಒರ್ವ ಮಹಿಳೆಯಾಗಿ ನಾನು ಮಾಡಿದ್ದೇನೆ. ನನಗೆ ಹಣಬಲ, ಜಾತಿ ಬಲ ಇಲ್ಲದೆ ಇರಬಹುದು, ನನಗೆ ಬಾಹುಬಲ ಇಲ್ಲ, ಬೆಂಬಲ ಕೊಡುವವರಿಲ್ಲದಿರಬಹುದು. ಮುಂಬರುವ ಲೋಕಸಭಾ ಚುನಾವಣೆಗೆ ಟಿಕೇಟ್ ಕೇಳುವ ಯಾರೋ ಒಬ್ಬರು ಕೆಲವರ ಮೂಲಕ ಅಪಪ್ರಚಾರ ಮಾಡುತ್ತಿರುಬಹುದು ಅಪಪ್ರಚಾರಗಳಿಗೆ ಹೆದರುವವಳು ನಾನಲ್ಲ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭ ಕರಂದ್ಲಾಜೆ ಹೇಳಿದ್ದಾರೆ.

ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಶೋಭಾ ಕರಂದ್ಲಾಜೆ ಅಭ್ಯರ್ಥಿಯಾಗದಂತೆ ಗೋ ಬ್ಯಾಕ್ ಶೋಭಾ ಅಭಿಯಾನದ ಕುರಿತು ಖಾರವಾಗಿ ಪ್ರತಿಕ್ರಿಯಿಸಿದ ಅವರು ತಾನು ಸಂಸದೆಯಾಗಿ ಆಯ್ಕೆಯಾದ ಬಳಿಕ ಉಡುಪಿಗೆ ಪಾಸ್ ಪೋರ್ಟ್ ಕೇಂದ್ರ ತಂದಿದ್ದೇನೆ. ರಾಜ್ಯದ ಏಕೈಕ ಸಖಿ ಸೆಂಟರ್ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಆರಂಭಿಸಿದ್ದು, ಎರಡು ಜಿಲ್ಲೆಗಳಲ್ಲಿ ಕೇಂದ್ರೀಯ ವಿದ್ಯಾಲಯ, ಉಡುಪಿಯಲ್ಲಿ ಜಿಟಿಡಿಸಿ ಕಟ್ಟಡ, ಕೌಶಲ್ಯ ತರಬೇತಿ ಕೇಂದ್ರದ ನಿರ್ಮಾಣವಾಗಿದೆ. 550 ಕೋಟಿ ರೂಪಾಯಿ ಸಿಆರ್ ಎಫ್ ಅನುದಾನ ಜಿಲ್ಲೆಗೆ ತರಲಾಗಿದ್ದು ಎರಡು ಜಿಲ್ಲೆಯ ಎಲ್ಲಾ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿ ನನ್ನ ಅವಧಿಯಲ್ಲಿ ನಡೆದಿದೆ. ಒರ್ವ ಮಹಿಳಾ ಸಂಸದೆಯಾಗಿ ಇಷ್ಟೊಂದು ಅಭಿವೃದ್ದಿ ನಾನು ಮಾಡಿದ್ದು ನನ್ನ ಮೊದಲು ಇದ್ದ ಪುರುಷ ಸಂಸದರು ಏನು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ತೋರಿಸಲಿ ಎಂದು ಸವಾಲು ಎಸೆದ ಶೋಭಾ ಮಾಜಿ ಸಂಸದ ಪ್ರಸ್ತುತ ಬಿಜೆಪಿಯಿಂದ ಟೀಕೆಟ್ ಆಕಾಂಕ್ಷಿಯಾಗಿರುವ ಜಯಪ್ರಕಾಶ್ ಹೆಗ್ಡೆಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಇಷ್ಟು ವರ್ಷ ಪುರುಷ ಅಭ್ಯರ್ಥಿಗಳು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದು ಏನು ಮಾಡಿದ್ದಾರೆ. ತನಗೆ ಟಿಕೇಟ್ ಕೇಳುವ ಭರದಲ್ಲಿ ಯಾರೋ ಒಬ್ಬರು ಅವಮಾನ ಮಾಡುತ್ತಿದ್ದಾರೆ. ನಾನು ಮತ್ತೆ ಇಲ್ಲಿ ಅಭ್ಯರ್ಥಿಯಾಗುವೆ ಎಂಬ ಆಸೆಗಾಗಿ ಇಷ್ಟೇಲ್ಲಾ ಅಭಿವೃದ್ಧಿ ಮಾಡಿಲ್ಲ. ಕೆಲವೊಂದ 10-20 ಹುಡುಗರ ಗುಂಪು ಕಟ್ಟಿಕೊಂಡು ನನ್ನ ವಿರುದ್ದ ಅಪಪ್ರಚಾರ ನಡೆಯುತ್ತಿದೆ ಇದಕ್ಕೆಲ್ಲಾ ಹೆದರುವ ಪ್ರಶ್ನೆಯೇ ಇಲ್ಲ. ನನ್ನ ವಿರುದ್ದ ದನಿಯೆತ್ತಿದವರು ಬಿಜೆಪಿಗೆ ನೀಡಿದ ಕೊಡುಗೆಯೇನು ಎನ್ನುವುದು ಕೂಡ ಮುಖ್ಯವಾಗಿದೆ. ನಾನು ಬಿಜೆಪಿ ಪಕ್ಷಕ್ಕಾಗಿ ಕಳೆದ 25 ವರ್ಷಗಳಿಂದ ಮಣ್ಣು ಹೊತ್ತಿದ್ದೇನೆ ಅಲ್ಲದೆ ರಾಜ್ಯದಾದ್ಯಂತ ಒಡಾಡಿದ್ದೇನೆ. ಈಗ ನನ್ನ ವಿರುದ್ದ ವ್ಯವಸ್ಥಿತ ಅಪಪ್ರಚಾರ ನಡೆಯುತ್ತಿದೆ. ನನ್ನ ವಿರುದ್ದ ಅಪಪ್ರಚಾರ ಮಾಡುವವರು ಮೊದಲು ಅವರು ಬಿಜೆಪಿಗೆ ನೀಡಿದ ಕೊಡುಗೆಯೇನು ಎನ್ನುವುದರ ಕುರಿತು ನನ್ನ ಜೊತೆಗೆ ಚರ್ಚೆಗೆ ಬರಲಿ ಮತ್ತೆ ಲೋಕಸಭೆಯ ಟಿಕೇಟ್ ಕೇಳಲಿ ಎಂದು ಹೆಸರು ಹೇಳದೆ ಜಯಪ್ರಕಾಶ್ ಹೆಗ್ಡೆಗೆ ಶೋಭಾ ಟಾಂಗ್ ನೀಡಿದರು.

ಬೆಂಗಳೂರು ಏರ್ ಶೋ ಸ್ಥಳದಲ್ಲಿ ನಡೆದ ಬೆಂಕಿ ಅವಘಡದ ಕುರಿತು ಪ್ರತಿಕ್ರಿಯಿಸಿದ ಶೋಭಾ ಅವರು ಏರ್ ಶೋ ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕ್ರಮ ಆಗಿದ್ದು, ಕಾರ್ಯಕ್ರಮಕ್ಕೆ ರಕ್ಷಣೆ ಕೊಡಬೇಕಾದದ್ದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಏರ್ ಶೋಗೆ ದೇಶ ವಿದೇಶದಿಂದ ಜನ ಬಂದಿದ್ದು, ರಾಜ್ಯ ಸರ್ಕಾರದ ಬೇಜವಾಬ್ದಾರಿ ಈ ಅವಘಡಕ್ಕೆ ಕಾರಣ. ಏರ್ ಶೋ ಬೆಂಗಳೂರಿನಿಂದ ಸ್ಥಳಾಂತರಗೊಳ್ಳುವ ವೇಳೆ ನಾವು ದನಿ ಎತ್ತಿದ್ದೇವು ಆದರೆ ಈಗ ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ರಾಜ್ಯ ಸರ್ಕಾರ ತನ್ನ ತಪ್ಪನ್ನು ಬೇರೆಯವರ ಮೇಲೆ ಹೊರಿಸುವ ಕೆಲಸ ಮಾಡುತ್ತಿದೆ. ರಕ್ಷಣೆ ಕೊಡಲು ಸಾಧ್ಯವಾಗುವುದಿಲ್ಲ ಎಂದದಾರೆ ಅದರ ಆರ್ಥ ಏನು? ಪೊಲೀಸ್, ಅಗ್ನಿಶಾಮಕ ಇಲಾಖೆ ಏನು ಮಾಡುತ್ತಿತ್ತು, ಕಾಶ್ಮೀರದ ಪುಲ್ವಾಮ ಘಟನೆಗೂ ಇದಕ್ಕೂ ಏನಾದರು ಲಿಂಕ್ ಇದೆಯಾ ಅಥವಾ ದೇಶದ್ರೋಹಿಗಳು ಈ ಕೃತ್ಯದಲ್ಲಿ ತೊಡಗಿರಬಹುದಾ ಎನ್ನುವುದರ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಶೋಭಾ ಆಗ್ರಹಿಸಿದರು.


Spread the love

Exit mobile version