Home Mangalorean News Kannada News ಗೌರಿ ಲಂಕೇಶ್ ಹತ್ಯೆ: ತನಿಖೆ ಚುರುಕುಗೊಳಿಸುವಂತೆ ಲೇಖಕರ ಮನವಿ

ಗೌರಿ ಲಂಕೇಶ್ ಹತ್ಯೆ: ತನಿಖೆ ಚುರುಕುಗೊಳಿಸುವಂತೆ ಲೇಖಕರ ಮನವಿ

Spread the love

ಗೌರಿ ಲಂಕೇಶ್ ಹತ್ಯೆ: ತನಿಖೆ ಚುರುಕುಗೊಳಿಸುವಂತೆ ಲೇಖಕರ ಮನವಿ

ಮಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ಚುರುಕುಗೊಳಿಸುವಂತೆ ರಾಜ್ಯ ಹಾಗೂ ಹೊರ ರಾಜ್ಯದ ಲೇಖಕರು ಇಂದು ಸ್ಥಳೀಯ ಜಿಲ್ಲಾಧಿಕಾರಿಗಳ ಮೂಲಕ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದ್ದು, ಇದರ ಭಾಗವಾಗಿ ದ.ಕ.ಜಿಲ್ಲೆಯ ಲೇಖಕರ ಬಳಗದ ನಿಯೋಗವು ಜಿಲ್ಲಾಧಿಕಾರಿಯವರನ್ನು ಇಂದು ಭೇಟಿ ಮಾಡಿ ಮನವಿ ಸಲ್ಲಿಸಿತು.

ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಇಂತಹ ಹತ್ಯೆಗಳು ಮರುಕಳಿಸದಂತೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲೆಯ 61 ಮಂದಿ ಲೇಖಕರು ಸಹಿ ಮಾಡಿರುವ ಮನವಿಯಲ್ಲಿ ಸರಕಾರವನ್ನು ಒತ್ತಾಯಿಸಲಾಗಿದೆ.

ಸುರೇಶ್ ಭಟ್ ಬಾಕ್ರಬೈಲು, ಉಮರ್ ಯು.ಹೆಚ್., ಮಹೇಶ್ ನಾಯಕ್, ಇಸ್ಮತ್ ಪಜೀರ್, ವಿಲ್ಸನ್ ಕಟೀಲು, ಮುಹಮ್ಮದ್ ಮುಹ್ಸಿನ್ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದರು.


Spread the love

Exit mobile version