Home Mangalorean News Kannada News ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಪಿ.ಎಫ್.ಐ ಸಂಘಟನೆ ನಿಷೇಧಿಸಿ: ವಿ.ಎಚ್.ಪಿ.

ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಪಿ.ಎಫ್.ಐ ಸಂಘಟನೆ ನಿಷೇಧಿಸಿ: ವಿ.ಎಚ್.ಪಿ.

Spread the love

ಜನರಲ್ಲಿ ಭೀತಿ ಸೃಷ್ಟಿಸುತ್ತಿರುವ ಪಿ.ಎಫ್.ಐ ಸಂಘಟನೆ ನಿಷೇಧಿಸಿ: ವಿ.ಎಚ್.ಪಿ.

ಮಂಗಳೂರು: ಹಿಂದೂ ನಾಯಕರ ಕೊಲೆಗೆ ಕಾರಣವಾಗುತ್ತಿರುವ ಪಿಎಫ್ ಐ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯ ಗುಂಪಿಗೆ ಸೇರಿಸಿ ಶಾಶ್ವತವಾಗಿ ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಜಗದೀಶ್ ಶೇಣವ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಶರತ್ ಮಡಿವಾಳ ಹತ್ಯೆಯ ಆರೋಪಿಗಳನ್ನು ಬಂಧಿಸುವಲ್ಲಿ ಕಾರಣದ ಪೋಲಿಸರಿಗೆ ವಿಎಚ್ ಪಿ ಅಭಿನಂಧಿಸುತ್ತದೆ. ಪಿಎಫ್ ಐ ಸ್ಥಳೀಯ ನಾಯಕರು ರಾಷ್ಟ್ರ ಮಟ್ಟದ ಸಂಘಟನೆಯೊಂದಿಗೆ ಈ ಪ್ರಕರಣದಲ್ಲಿ ಕೈಜೋಡಿಸಿದ ಕುರಿತು ಈ ಮೊದಲು ಸುದ್ದಿ ಹಬ್ಬಿತ್ತು. ಸ್ಥಳೀಯ ನಾಯಕರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಲ್ಲಿ ಇನ್ನೂ ಹೆಚ್ಚಿನ ಸಂಗತಿ ಹೊರಬರಲು ಸಾಧ್ಯವಿದೆ ಎಂದರು.

ಈಗಾಗಲೇ ಶರತ್ ಕೊಲೆಯಲ್ಲಿ ಪಿಎಫ್ ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರ ಈ ಸಂಘಟನೆಗಳನ್ನು ನಿಷೇಧಿಸಬೇಕು. ಪಿಎಫ್ ಐ ಸಂಘಟನೆ ಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಪ್ರಕರಣದಲ್ಲಿ ರಾಜಕೀಯ ವಾಸನೆ ಬರುತ್ತಿದ್ದು ಪೋಲಿಸರೂ ಕೂಡ ಪ್ರಕರಣ ಭೇಧಿಸುವಲ್ಲಿ ವಿಳಂಬ ನೀತಿಯನ್ನು ಅನುಸರಿಸಿದ್ದು, ಒಂದು ವರ್ಗವನ್ನು ಒಲೈಸುವ ಸಲುವಾಗಿ ಸರಕಾರ ಕೂಡ ವಿಳಂಬ ನೀತಿಯನ್ನು ಅನುಸರಿಸಿದೆ ಎಂದರು.


Spread the love

Exit mobile version