Home Mangalorean News Kannada News ಜಾರ್ಜ್ ಫೆರ್ನಾಂಡಿಸ್ ನಿಧನ – ಮಂಗಳೂರು ಬಿಷಪ್ ಸಂತಾಪ

ಜಾರ್ಜ್ ಫೆರ್ನಾಂಡಿಸ್ ನಿಧನ – ಮಂಗಳೂರು ಬಿಷಪ್ ಸಂತಾಪ

Spread the love

ಜಾರ್ಜ್ ಫೆರ್ನಾಂಡಿಸ್ ನಿಧನ – ಮಂಗಳೂರು ಬಿಷಪ್ ಸಂತಾಪ

ಮಂಗಳೂರು: ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ನಿಧನಕ್ಕೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಪೀಟರ್ ಪೌಲ್ ಸಲ್ಡಾನಾ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಧರ್ಮಾಧ್ಯಕ್ಷರು ಜೋರ್ಜ್ ಫೆರ್ನಾಂಡಿಸ್ ಕಾರ್ಮಿಕರ ಹಾಗೂ ಶೋಷಿತರ ಅಭಿವೃದ್ಧಿಗಾಗಿ ಶ್ರಮಿಸಿ ನಮ್ಮ ದೇಶದ ರೈಲ್ವೆ ಹಾಗೂ ರಕ್ಷಣಾ ಸಚಿವರಾಗಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಪೊರೈಸಿ ಸರ್ವ ಜನರ ಒಳಿತಿಗಾಗಿ ತನ್ನನ್ನೇ ತೊಡಗಿಸಿಕೊಂಡು ವಿಶೇಷವಾಗಿ ಮಂಗಳೂರು ಧರ್ಮಪ್ರಾಂತ್ಯಕ್ಕೆ ಅಪಾರವಾಗಿ ಸೇವೆ ಸಲ್ಲಿಸಿ ಇಹಲೋಕ ತ್ಯಜಿಸಿದ ಜಾರ್ಜ್ ಫೆರ್ನಾಂಡಿಸ್ ನಿಧನವು ಅತೀವ ದುಃಖ ತಂದಿದೆ
ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ನಿಧನದಿಂದ ದುಃಖ ತಪ್ತರಾಗಿರುವ ಅವರ ಕುಟುಂಬದ ಸದಸ್ಯರಿಗೆ ಮತ್ತು ಅವರ ಅಭಿಮಾನಿಗಳಿಗೆ ಪರಮಾತ್ಮನು ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿರಿಸಿದ್ದಾರೆ.


Spread the love

Exit mobile version